ಮತದಾನದಲ್ಲಿ ಗೊಂದಲವಾದ ಕಾರಣ ಧಾರಚೂಲಾದಲ್ಲಿ ಜುಲೈ 21 ರಂದು ಮರು ಮತದಾನ ನಡೆಸಲಾಗಿತ್ತು. ಇದರ ಹೊರತು, ಬಿಜೆಪಿಯ ರಮೇಶ್ ಪೆಖರಿಯಾಲ್ ನಿಶಂಕರ ಹರಿದ್ವಾರ ಮತ್ತು ಅಜಯ್ ಟಮಟಾರ ಅಲಮೊಡಾದಿಂದ ಸಂಸದರಾಗಿ ಆಯ್ಕೆಯಾದ ನಂತರ ದೊಯಿವಾಲ್ ಮತ್ತು ಸೋಮೆಶ್ವರದಲ್ಲಿ ಖಾಲಿಯಾದ ವಿಧಾನಸಭೆ ಸೀಟುಗಳಿಗಾಗಿ ಉಪಚುನಾವಣೆ ನಡೆದಿತ್ತು. ಮೂರು ಕಡೆ ಕಾಂಗ್ರೆಸ್ ಉಮೇದುವಾರರು ಗೆಲುವನ್ನು ಸಾಧಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ಐದು ಸೀಟುಗಳಾದ ಅಲಮೊಡಾ, ಗಟವಾಲ್, ಹರಿದ್ವಾರ್, ನೈನಿತಾಲ-ಉಧಮ್ಸಿಂಗ್ ನಗರ್ ಮತ್ತು ಟಿಹರಿ ಗಟವಾಲ್ನಲ್ಲಿ ಗೆಲುವನ್ನು ಸಾಧಿಸಿದ್ದ ಬಿಜೆಪಿಗೆ ವಿಧಾನಸಭೆ ಚುನಾವಣೆ ಫಲಿತಾಂಶ ದೊಡ್ಡ ಹೊಡೆತ ಬಿದ್ದಿದೆ.