ಪ್ರತಿವಾದಿಗಳ ಪರ ವಕೀಲ ವಾದ ಮಂಡಿಸುವ ಸಂದರ್ಭದಲ್ಲಿ ಅಲ್ಲಿದ್ದ ವಕೀಲ ರಾಜೀವ್ ಯಾದವ್ ವಂದೇಮಾತರಂ ಘೋಷಣೆ ಕೂಗಿದಾಗ ನ್ಯಾಯಮೂರ್ತಿಗಳು ಯಾರು ಘೋಷಣೆ ಕೂಗಿದ್ದೆಂದು ವಿಚಾರಿಸಿ ಅವರನ್ನು ವಶಕ್ಕೆ ಪಡೆಯುವಂತೆ ಭದ್ರತಾ ಸಿಬ್ಬಂದಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ವಕೀಲ ರಾಜೀವ್ ಯಾದವ್ ನ್ಯಾಯಮೂರ್ತಿಗಳ ಕ್ಷಮೆ ಕೋರಿ ತಾವು ಮುಂದೆ ಈ ರೀತಿ ವರ್ತಿಸುವುದಿಲ್ಲವೆಂದು ತಿಳಿಸಿದರು.