ಲಲಿತ್ಗೇಟ್ ವಿವಾದದಿಂದಾಗಿ ಜರ್ಜರಿತವಾಗಿರುವ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ತಮ್ಮನ್ನು ಈ ವಿಪ್ಪತ್ತಿನಿಂದ ಪಾರು ಮಾಡುವಂತೆ ದೈವದ ಮೊರೆ ಹೋಗಿದ್ದಾರೆ. ಜುಲೈ 29 ರಂದು ಮಧ್ಯಪ್ರದೇಶದ ಡಾಟಿಯಾ ಜಿಲ್ಲೆಯ ಮಾ ಪಿತಾಂಬರ ದೇಗುಲದ ಒಳಗೆ ಹೋಗಿದ್ದ ಅವರು ಅಲ್ಲಿಂದ ಹೊರಗೆ ಬಂದಿದ್ದು ಜುಲೈ 31 ರಂದು. ಅಂದರೆ ಬರೊಬ್ಬರಿ ಎರಡುವರೆ ದಿನಗಳ ಕಾಲ ಅವರು ದೇವಸ್ಥಾನದಿಂದ ಹೊರಗೆ ಬರಲೇ ಇಲ್ಲ.
ಗುರುವಾರ ಎರಡು ಗಂಟೆಗೂ ಅಧಿಕ ಕಾಲ ರಾಜೇ ದೇಗುಲದಲ್ಲಿ ಹೋಮ- ಹವನ, ವಿಶೇಷ ಪೂಜೆ, ಭಜನೆ, ಕಾರ್ಯಕ್ರಮಗಳನ್ನು ನೆರವೇರಿಸಿದ್ದಾರೆ. ಜುಲೈ 31 ರಂದು ಅವರು ಗುರು ಪೂರ್ಣಿಮೆ ನಿಮಿತ್ತ ವಿಶೇಷ ಪೂಜೆಯನ್ನು ನೆರವೇರಿಸಿದ್ದಾರೆ. ದೇವಸ್ಥಾನದ ಟ್ರಸ್ಟ್ನಲ್ಲಿ ರಾಜೇ ಅಧ್ಯಕ್ಷರಾಗಿದ್ದಾರೆ.