ಇಂದು ತಮ್ಮ ತಂದೆಯ ಕೊನೆಯಾಸೆಯನ್ನು ಅವರ ಪುತ್ರ ಶರತ್ ಬಹಿರಂಗ ಪಡಿಸಿದ್ದು, ತಮ್ಮ ಮರಣದ ನಂತರ ದೇಹವನ್ನು ಹಿಂದು ಸಂಪ್ರದಾಯದಂತೆ ತಮ್ಮ ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರ ಮಾಡಬೇಕು. ತಾನು ಹುಟ್ಟಿದ ಮನೆಯನ್ನು ಗ್ರಂಥಾಲಯ ಮಾಡಬೇಕೆಂದು ಸಾಹಿತಿ ಪುತ್ರನಲ್ಲಿ ಮೂರ್ತಿ ಹೇಳಿಕೊಂಡಿದ್ದರಂತೆ. ಆದರೆ ಕಾರಣಾಂತರಗಳಿಂದ ಅವರ ಅಂತ್ಯಕ್ರಿಯೆಯನ್ನು ಬೆಂಗಳೂರಿನಲ್ಲೇ ಮಾಡಲಾಗುತ್ತಿದ್ದು ಸರಸ್ವತಿ ಪುತ್ರನ ಕೊನೆಯಾಸೆಯೊಂದು ಈಡೇರದಂತಾಗಿದೆ.