ರಾಷ್ಟ್ರ ರಾಜಧಾನಿಯ ನಿಗಮ್ ಭೋದ್ ಘಾಟ್ನಲ್ಲಿ ಸಿಂಗ್ ಅಂತ್ಯಸಂಸ್ಕಾರವನ್ನು ನಡೆಸಲಾಯಿತು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪಮುಖ್ಯಮಂತ್ರಿ ಸಿಸೋಡಿಯಾ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕ ಅಜಯ್ ಮಾಕನ್ ಅಂತ್ಯಕ್ರಿಯೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅಕ್ಷಯ ಸಿಂಗ್ ಮನೆಗೆ ತೆರಳಿ ರಾಹುಲ್ ಗಾಂಧಿ ಸಾಂತ್ವನ ನೀಡಿದ್ದಾರೆ.
ಮಧ್ಯಪ್ರದೇಶ ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ವ್ಯಾಪಂ ಹಗರಣದ ತನಿಖೆಯಲ್ಲಿ ತೊಡಗಿದ್ದ ಸಿಂಗ್ ಟುಡೇ ಗ್ರೂಪ್ಗಾಗಿ ಕಾರ್ಯನಿರ್ವಹಿಸುತ್ತಿದ್ದರು.
ವ್ಯಾಪಂ ಹಗರಣಕ್ಕೆ ಸಂಬಂಧಿಸಿದ ಆರೋಪಿಗಳು, ಸಾಕ್ಷಿಗಳು, ತನಿಖೆ ನಡೆಸುತ್ತಿದ್ದ ಅಕ್ಷಯ್ ಸಿಂಗ್ ಸೇರಿದಂತೆ ಈವರೆಗೆ 46 ಜನರು ನಿಗೂಢವಾಗಿ ಸಾವನ್ನಪ್ಪಿದ್ದಾರೆ.