ಶಶಿಕಲಾ ನಟರಾಜನ್ ಜೈಲುಪಾಲಾದರೂ ಅವರ ಬಣ ಸರ್ಕಾರ ರಚನೆಯಲ್ಲಿ ತೊಡಗಿರುವುದು ಈಗಾಗಲೇ ರಾಜೀನಾಮೆ ನೀಡಿರುವ ಪನ್ನೀರ್ ಸೆಲ್ವಂ ಬಣಕ್ಕೆ ನುಂಗಲಾರದ ತುತ್ತಾಗಿದೆ.ಶತಾಯಗತಾಯ ಪಳನಿ ಮುಖ್ಯಮಂತ್ರಿಯಾಗುವುದನ್ನು ತಡೆಯಲು ರಾಜಕೀಯ ತಂತ್ರಗಾರಿಕೆಯಲ್ಲಿ ಮುಳುಗಿರುವ ಪನ್ನೀರ್ ಬೆಂಬಲಿಗರು ಮತ್ತೀಗ ಎಐಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ ನಟರಾಜನ್ ಆಯ್ಕೆ ಪ್ರಶ್ನಿಸಿ ಚುನಾವಣಾ ಆಯೋಗದ ಮೆಟ್ಟಿಲೇರಿದ್ದಾರೆ.