ನಿರ್ಮಲಾ ಸೀತಾರಾಮನ್ ಅವರು ಕೈರ್ನ್ಸ್ನಲ್ಲಿ ಜಿ20 ವಿತ್ತಸಚಿವರು ಮತ್ತು ಗವರ್ನರ್ಗಳ ಸಭೆಯಲ್ಲಿ ನಾಳೆ ಭಾಗವಹಿಸಲು ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಶುಕ್ರವಾರ ಬೆಳಿಗ್ಗೆ ಅವರು ಸಿಡ್ನಿಗೆ ಬಂದಿಳಿದಾಗ ಅವರ ಲಗೇಜ್ ಕಾಣೆಯಾಗಿತ್ತು. ನನ್ನ ಉಡುಪುಗಳೆಲ್ಲ ಸೂಟ್ಕೇಸ್ನಲ್ಲಿತ್ತು. ಕೈರ್ನ್ಸ್ನಲ್ಲಿ ಉಡುವುದಕ್ಕೆ ಬೇರೆ ಸೀರೆಗಳು ಸಿಗುತ್ತದೆ ಎನ್ನೋದು ಗ್ಯಾರಂಟಿಯಿಲ್ಲ. ಪರಿಸ್ಥಿತಿ ಕೆಟ್ಟದಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ದೆಹಲಿಯಲ್ಲಿ ಏರ್ ಇಂಡಿಯಾ ವಕ್ತಾರ ಸಚಿವರ ಲಗೇಜನ್ನು ತಪ್ಪಾಗಿ ಸಿಡ್ನಿಯ ಬದಲು ಮೆಲ್ಬೋರ್ನ್ನಲ್ಲಿ ತೆಗೆಯಲಾಗಿದೆ ಎಂದು ಹೇಳಿದ್ದಾರೆ. ನಾವು ಕೈರ್ನ್ಸ್ಗೆ ಈ ಬ್ಯಾಗ್ ಕಳಿಸಿದ್ದು, ಸಚಿವರನ್ನು ಕೆಲವೇ ಗಂಟೆಗಳಲ್ಲಿ ಲಗೇಜ್ ಮುಟ್ಟಲಿದೆ ಎಂದು ಹೇಳಿದ್ದಾರೆ.