ಕಲಾಂ ಅವರನ್ನು ಅಪಾರವಾಗಿ ಆರಾಧಿಸುತ್ತಿದ್ದ ಬಾಲಕ ಅವರನ್ನು ಕಾಕಾ ಎನ್ನುತ್ತಿದ್ದ. ಆಕಾಶ್ ನಿವೃತ್ತ ಸೇನಾಧಿಕಾರಿಯ ಮಗನಾಗಿದ್ದು 2009ರಲ್ಲಿ ಆತ ಲಿವರ್ ಸಮಸ್ಯೆಗೆ ಸಿಲುಕಿ ದೆಹಲಿಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ. ಆಗ ವೈದ್ಯರು ನಿನಗೆ ಯಾರು ಸ್ಪೂರ್ತಿ ಎಂದಾಗ ಆತ ಕಲಾಂ ಎಂದಿದ್ದ. ಆತನ ಆರೋಗ್ಯ ಸ್ಥಿತಿ ಡೋಲಾಯಮಯವಾಗಿತ್ತು. ವೈದ್ಯರು ಆತನಿಗೆ ಲಿವರ್ ಕಸಿ ಮಾಡುವುದಕ್ಕೆ ನಿರ್ಧರಿಸಿದರು. ಆತನಿಗೆ ಸ್ಪೂರ್ತಿ ತುಂಬಲು ವೈದ್ಯರು ನೀನು ಕಲಾಂ ಅವರನ್ನು ಭೇಟಿಯಾಗಲು ಬಯಸುತ್ತೀಯಾ ಎಂದಾಗ ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆಸ್ಪತ್ರೆಯ ಅಧಿಕಾರಿಗಳು ಕಲಾಂ ಅವರ ಬಳಿ ಬಾಲಕನ ಕುರಿತು ಸಂದೇಶ ಕಳುಹಿಸಿದಾಗ ಮಕ್ಕಳನ್ನು ಅಪಾರವಾಗಿ ಪ್ರೀತಿಸುವ ಅವರು ಆಸ್ಪತ್ರೆಗೆ ಧಾವಿಸಿ ಬಂದಿದ್ದರು. ಆತನ ಜತೆ ಸಮಯ ಕಳೆದು, ಧೈರ್ಯ ತುಂಬಿ, ಗೆಟ್ ವೆಲ್ ಸೂನ್ ಕಾರ್ಡ್ ಇತ್ತು ನಿರ್ಗಮಿಸಿದ್ದರು. ಕಾಕಾನ ಈ ಪ್ರೀತಿಗೆ ಮೂಕ ವಿಸ್ಮಿತನಾದ ಬಾಲಕನಿಗೆ ಅವರ ಮೇಲಿನ ಪ್ರೀತಿ ಇಮ್ಮಡಿಯಾಯಿತು.