ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ ಪಕ್ಷಕ್ಕೆ ಮರಳಿದಲ್ಲಿ ಸಂತಸ: ಕೇಜ್ರಿವಾಲ್

ಶುಕ್ರವಾರ, 17 ಜುಲೈ 2015 (15:16 IST)
ಆಮ್ ಆದ್ಮಿ ಪಕ್ಷದ ಭಿನ್ನಮತಿಯ ನಾಯಕರಾದ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಪಕ್ಷಕ್ಕೆ ಮರಳಿದಲ್ಲಿ ಸಂತೋಷವಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.  
 
ಉಭಯ ನಾಯಕರು ಪಕ್ಷಕ್ಕೆ ಮರಳುವುದಾದಲ್ಲಿ ಸಂತಸವಾಗುತ್ತದೆ. ಅವರ ಆಗಮನದಿಂದ ಪಕ್ಷ ಮತ್ತಷ್ಟು ಸಶಕ್ತವಾಗುತ್ತದೆ ಎಂದು ಕೇಜ್ರಿವಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ. 
 
ಕೇಜ್ರಿವಾಲ್ ಬೆಂಬಲಿಗರು ಹಾಗೂ ಪಕ್ಷದ ಸಂಸ್ಥಾಪಕ ನಾಯಕರೊಂದಿಗೆ ಸುಮಾರು ಎರಡು ತಿಂಗಳುಗಳ ಕಾಲ ಪರಸ್ಪರ ವಾದ ವಿವಾದದ ಹಿನ್ನೆಲೆಯಲ್ಲಿ, ಪಕ್ಷ ವಿರೋಧಿ ಚಟುವಟಿಕೆಯಿಂದಾಗಿ ಉಭಯ ನಾಯಕರನ್ನು ವಜಾಗೊಳಿಸಲಾಗಿತ್ತು.
 
ಆಮ್ ಆದ್ಮಿ ಪಕ್ಷದಿಂದ ಉಚ್ಚಾಟಿಸಿದ ನಂತರ ಯಾದವ್ ಮತ್ತು ಭೂಷಣ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಹಿರಂಗವಾಗಿ ಟೀಕಿಸಿದ್ದರು. 
 
ಉಭಯ ನಾಯಕರು ನಂತರ ಸ್ವರಾಜ್ ಅಭಿಯಾನ್ ಪ್ರಚಾರ ಕಾರ್ಯವನ್ನು ಆರಂಭಿಸಿರುವುದನ್ನು ಸ್ಮರಿಸಬಹುದು.
 

ವೆಬ್ದುನಿಯಾವನ್ನು ಓದಿ