ತೆಲಂಗಾಣಕ್ಕೆ ಅವಮಾನ ಮಾಡುವುದನ್ನು ಮುಂದುವರೆಸಿದರೆ, ಮಾಧ್ಯಮಗಳನ್ನು 10 ಅಡಿ ಆಳದಲ್ಲಿ ಹೂತು ಹಾಕುವುದಾಗಿ ಬೆದರಿಕೆ ಹಾಕುವುದರ ಮೂಲಕ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ರಾಜ್ಯದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಬಿಸಿ ಬಿಸಿ ವಿವಾದವೊಂದನ್ನು ಹುಟ್ಟು ಹಾಕಿದ್ದಾರೆ.
ಪ್ರಖ್ಯಾತ ಕವಿ ಮತ್ತು ಸಾಹಿತ್ಯ ವಿಮರ್ಶಕ ಕಲೋಜಿ ನಾರಾಯಣ ರಾವ್ ಜನ್ಮ ಶತಮಾನೋತ್ಸವದ ಜ್ಞಾಪಕಾರ್ಥವಾಗಿ, ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡುತ್ತಿದ್ದ ಅವರು ತೆಲಂಗಾಣದ ಅಸ್ತಿತ್ವ ಮತ್ತು ಘನತೆಯ ಕುರಿತು ಅವಮಾನಕರವಾಗಿ ನಡೆದುಕೊಂಡವರನ್ನು ನಾವು 10 ಅಡಿ ಗುಂಡಿ ತೆಗೆದು ಹೂತು ಹಾಕುತ್ತೇವೆ ಎಂಬ ಬೇಜವಾಬ್ದಾರಿ ಮಾತುಗಳನ್ನಾಡಿದರು.