ಹಸಿ ಬಾಣಂತಿಯ ಮೇಲೆ ಅತ್ಯಾಚಾರ ಎಸಗಿ, ಮನೆಯನ್ನು ದೋಚಿದ 12 ಮಂದಿ ದರೋಡೆಕೋರರು

ಸೋಮವಾರ, 21 ಜುಲೈ 2014 (11:05 IST)
ಮನೆಯೊಂದಕ್ಕೆ ಹೊಕ್ಕ 12 ಜನ ದರೋಡೆಕೋರರು, ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಮನೆಯವರನ್ನೆಲ್ಲಾ ಥಳಿಸಿ, ಹಣ ಮತ್ತು ಚಿನ್ನಾಭರಗಳನ್ನೆತ್ತಿಕೊಂಡು ಪರಾರಿಯಾದ ಘಟನೆ ಹಾಪುರ್ ಜಿಲ್ಲೆಯ ನಾರಾಯಣಪುರದಲ್ಲಿ ನಡೆದಿದೆ. 

ಶನಿವಾರ ರಾತ್ರಿ ಶಾಹೀದ್ ಎಂಬುವವರ ಮನೆಗೆ ನುಗ್ಗಿದ 12 ಜನ ದರೋಡೆಕೋರರು ಕುಟುಂಬದ ಎಲ್ಲ ಸದಸ್ಯರನ್ನು ಕಟ್ಟಿ ಹಾಕಿ ಮನೆಯಲ್ಲಿದ್ದ 20.000 ಹಣ, 1.5 ಲಕ್ಷದ ಚಿನ್ನಾಭರಣಗಳನ್ನು ಎತ್ತಿಕೊಂದು ಹೋಗಿದ್ದಾರೆ ಎಂದು ಪೋಲಿಸರು ಹೇಳಿದ್ದಾರೆ. 
 
ಅಷ್ಟೇ ಅಲ್ಲದೇ ಈ ದುರುಳರು  20 ದಿನಗಳ ಹಸುಗೂಸನ್ನು ಹೊಂದಿರುವ ಹಸಿ ಬಾಣಂತಿಯನ್ನು ಅಮಾನುಷವಾಗಿ ಎಳೆದುಕೊಂಡು ಹೋಗಿ ಹತ್ತಿರದ ಗದ್ದೆಯೊಂದರ ಮೇಲೆ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ. 
 
ಅಪರಾಧ ದಳ ಸೇರಿದಂತೆ ಪೋಲಿಸರ ಮೂರು ತಂಡಗಳು ತನಿಖೆಯಲ್ಲಿ ತೊಡಗಿವೆ ಎಂದು ಪೋಲಿಸ್ ಅಧಿಕಾರಿ ವಿಶಾಲ್ ಯಾದವ್ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ