ಆರೋಪಿ ಸುಲೇಖಾ ದೇವಿಯಷ್ಟೇ ಅಲ್ಲದೆ ಆಕೆಯ ತಾಯಿ ರಾಧಾ ದೇವಿ ಮತ್ತು ಕಿರಿಯ ಸಹೋದರಿ ತುಳಸಿ ದೇವಿ, ಪುತ್ರಿ ಚೋಟಿ ಕುಮಾರಿ ಮತ್ತು ಅವರಿಗೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಮೋತಿ ರಾಮ್ ಎಂಬಾತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹೊಸದಾಗಿ ನೇಮಕಗೊಂಡಿರುವ ನಳಂದಾ ಎಸ್ಪಿ ಕುಮಾರ್ ಆಶಿಷ್ ತಿಳಿಸಿದ್ದಾರೆ.
ಪ್ರಕರಣದ ಕುರಿತು ಫೆಬ್ರವರಿ 15 ರಂದು ಪ್ರತಿಕ್ರಿಯಿಸಿದ್ದ ಬಿಹಾರ್ ಸಿಎಂ ನಿತೀಶ್ ಕುಮಾರ್, ಆರೋಪಿ ಶಾಸಕ ಎಷ್ಟು ದಿನ ತಲೆ ಮರೆಸಿಕೊಂಡಿರಬಹುದು, ಅವರನ್ನು ಆದಷ್ಟು ಬೇಗ ಬಂಧಿಸಲಾಗುವುದು ಎಂದು ಹೇಳಿದ್ದರು. ಆರ್ಜೆಡಿ ಶಾಸಕನನ್ನು ಅಮಾನತುಗೊಳಿಸಿದೆ. ಸ್ಥಳೀಯ ಕೋರ್ಟ್ ಆತನ ನಿರೀಕ್ಷಣಾ ಜಾಮೀನು ಮನವಿಯನ್ನು ತಳ್ಳಿ ಹಾಕಿದೆ.