ಕಳೆದ ಕೆಲ ದಿನಗಳ ಹಿಂದೆ ನಿನ್ನಿಂದ ನನಗೆ ಮಗುವು ಸಹ ಆಗಿದೆ ಎಂದು ಹೇಳಿ ಪ್ರಿಯಕರನಿಗೆ ಯಾಮಾರಿಸಿದ್ದ ಆಕೆ, ಭೇಟಿಯಾಗಲು ಮಗುವಿನ ಜತೆಗೆ ಬರುವುದಾಗಿ ಹೇಳಿದ್ದಳು. ಅದರಂತೆ ನೆರೆಮನೆಯ 9 ತಿಂಗಳ ಮಗುವನ್ನು ಅಪಹರಿಸಿದ ಆಕೆ ಪ್ರಿಯಕರನನ್ನು ಭೇಟಿಯಾಗಲು ಜೈಸಿನಗರಕ್ಕೆ ಹೋಗಿದ್ದಾಳೆ. ಆಕೆಯನ್ನು ನಂಬಿದ ರಾಕೇಶ್ ಅವರಿಬ್ಬರನ್ನು ಕರೆದುಕೊಂಡು ಭೋಪಾಲಕ್ಕೆ ಪ್ರಯಾಣ ಬೆಳೆಸಿದ್ದಾನೆ.