ಬಳೆ ಮತ್ತು ಕುಂಕುಮದ ಜತೆ ನನ್ನ ಶವ ನೋಡಲು ಬಾ; ಪ್ರಿಯಕರನಿಗೆ ಮನವಿ ಮಾಡಿಟ್ಟು ಆತ್ಮಹತ್ಯೆ
ಬುಧವಾರ, 10 ಫೆಬ್ರವರಿ 2016 (12:22 IST)
ಎಂಜಿನಿಯರಿಂಗ್ ಕಾಲೇಜಿನ ಸಹಾಯಕ ಉಪನ್ಯಾಸಕಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯವಾಡದ ನೆಲ್ಲೂರಿನಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಮೃತರು ಡಿವಿಎಸ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದು ಎಂದು ಗುರುತಿಸಲಾಗಿದ್ದು ಭಾನು ತೇಜ್ ಎಂಬುವವರನ್ನು ಪ್ರೀತಿಸುತ್ತಿದ್ದಳು. ಸಾವಿಗೂ ಮುನ್ನ ಸೆಲ್ಫಿ ವಿಡಿಯೋವನ್ನು ಮಾಡಿಟ್ಟಿದ್ದು ಬಳೆ ಮತ್ತು ಕುಕುಂಮದ ಜತೆ ನನ್ನ ಶವ ನೋಡಲು ಬಾ ಎಂದು ಹೇಳಿದ್ದಾಳೆ.
ಪ್ರಿಯಕರನ ಜತೆ ತಮ್ಮ ಮದುವೆ ವಿಳಂಬವಾಗುತ್ತಿರುವುದಕ್ಕೆ ಸಾವಿಗೆ ಶರಣಾಗುತ್ತಿರುವುದಾಗಿ ಮೃತ ಯುವತಿ ಡೆತ್ ನೋಟ್ ಬರೆದಿಟ್ಟಿದ್ದಾರೆ.
ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಮೃತಳ ಪ್ರಿಯಕರನ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದಾಗ ಯುವತಿ ತಾಯಿ ಕೂಡ ಮನೆಯಲ್ಲಿದ್ದರು, ಕೆಲಸದಿಂದ ಹಿಂತಿರುಗಿದ್ದ ಮಗಳು ಬಹಳ ಹೊತ್ತಾದರೂ ಕೋಣೆಯ ಬಾಗಿಲು ತೆರೆಯಲಿಲ್ಲವೆಂದು ಕಿಟಕಿ ಮೂಲಕ ಇಣುಕಿ ನೋಡಿದಾಗ ಆಕೆ ನೇಣು ಹಾಕಿಕೊಂಡಿರುವುದು ಬೆಳಕಿಗೆ ಬಂತು ಎಂದು ತಾಯಿ ಪೊಲೀಸ್ ವಿಚಾರಣೆ ವೇಳೆ ಹೇಳಿದ್ದಾರೆ.
ಮೃತೆ ಮತ್ತು ಭಾನು ನಡುವೆ ಕಳೆದೆರಡು ವರ್ಷಗಳಿಂದ ಪ್ರೇಮ ಸಂಬಂಧವಿದ್ದು, ಇತ್ತೀಚಿಗೆ ಮದುವೆ ವಿಷಯಕ್ಕೆ ವಾಗ್ವಾದ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಆದರೆ ತನಿಖೆಯ ನಂತರವಷ್ಟೇ ಆತ್ಮಹತ್ಯೆಗೆ ಕಾರಣವೇನೆಂದು ತಿಳಿದು ಬರಲಿದೆ.