ಜಿಲ್ಲೆಯ ಲೋಹತ್ತಾ ಗ್ರಾಮದ ನಿವಾಸಿ ತುಕಾರಾಮ್ ಮಾನೆ ಕಳೆದ ಭಾನುವಾರ ಹೃದಯಾಘಾತದಿಂದ ಮರಣ ಹೊಂದಿದ್ದರು. ಸೋಮವಾರ ಅವರ ಅಂತ್ಯಕ್ರಿಯೆ ನಡೆಸಲಾಗಿತ್ತು. ಮೃತದೇಹವನ್ನು ಸುಟ್ಟ ಕೆಲವೇ ಗಂಟೆಗಳಲ್ಲಿ ಸೋಮವಾರ ಸಂಜೆಯಿಂದ ತುಕಾರಾಮ್ ಪತ್ನಿ ಉಷಾ ನಾಪತ್ತೆಯಾಗಿದ್ದರು. ಮಂಗಳವಾರ ತುಕಾರಾಮ್ ಅವರ ಚಿತಾ ಭಸ್ಮವನ್ನು ಸಂಗ್ರಹಿಸಲೆಂದು ಸ್ಮಶಾನಕ್ಕೆ ಹೋದ ಕುಟುಂಬದವರಿಗೆ ತುಕಾರಾಮ್ ಚಿತೆಯಲ್ಲಿ ಸುಟ್ಟು ಕರಕಲಾಗಿದ್ದ ಅವರ ಪತ್ನಿ ಉಷಾಳ ದೇಹವೂ ಕೂಡ ಕಂಡಿದೆ.