ಜ್ಯೋತಿಷಿಯಿಂದ ಅತ್ಯಾಚಾರಕ್ಕೆ ಒಳಗಾದ ಯುವತಿ ಅನಾರೋಗ್ಯದಿಂದ ಬಳಲುತ್ತಿದ್ದು, ಈ ಅನಾರೋಗ್ಯಕ್ಕೆ ಯಾರೋ ಮಾಟ ಮಾಡಿಸಿದ್ದಾರೆ ಎಂದು ಭಾವಿಸಿ ಯುವತಿಯ ತಾಯಿ ಆಕೆಯನ್ನು ಜ್ಯೋತಿಷಿಯ ಬಳಿ ತೆರಳಲು ಸೂಚಿಸಿದ್ದಾಳೆ. ತಾಯಿಯ ಸೂಚನೆಯಂತೆ ಯುವತಿ ಕಳೆದ ಜುಲೈ 1ರಂದು ಪರಿಹಾರಕ್ಕಾಗಿ ಜ್ಯೋತಿಷಿಯ ಮನೆಗೆ ತೆರಳಿದ್ದಾಳೆ. ಈ ವೇಳೆ ಜ್ಯೋತಿಷಿ ಪರಿಹಾರ ನೀಡುವ ನೆಪದಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.
ರೇಪ್ ಮಾಡಿದ್ದಕ್ಕೆ ಆಕ್ರೋಶಗೊಂಡ ಯುವತಿ ಮರುದಿನ ರಾತ್ರಿ ಜ್ಯೋತಿಷಿಯ ಮನೆಗೆ ಮೊಬೈಲ್ ಮತ್ತು ಹರಿತವಾದ ಚಾಕುವಿನೊಂದಿಗೆ ತೆರಳಿದ್ದು, ಜ್ಯೋತಿಷಿಯ ಶಿಶ್ನವನ್ನೇ ಚಾಕುವಿನಿಂದ ಕತ್ತರಿಸಿ ಹಾಕಿದ್ದಾಳೆ. ಈ ಸಂದರ್ಭದ ಮಾತುಕತೆಯನ್ನು ಮೊಬೈಲ್ಲ್ಲಿ ರೆಕಾರ್ಡ್ ಮಾಡಿದ್ದಾಳೆ. ನಡೆದ ಘಟನೆಯನ್ನು ಆಕೆ ಪೋಷಕರಲ್ಲಿ ಹೇಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ದೂರು ಸ್ವೀಕರಿಸದ ಪೊಲೀಸರು ಸಂಧಾನ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ದೂರು ನೀಡಿದರೆ ಕೊಲೆ ಮಾಡುವುದಾಗಿ ಜ್ಯೋತಿಷಿ ಕಡೆಯವರು ಯುವತಿಗೆ ಬೆದರಿಕೆ ಹಾಕಿದ್ದಾರೆ. ಕೊನೆಗೆ ರಾಜಕೀಯ ನಾಯಕರು ಪ್ರವೇಶವಾಗಿ ಪೊಲೀಸ್ ಠಾಣೆಯಲ್ಲಿ ಜು.30ರಂದು ಪ್ರಕರಣ ದಾಖಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ಮಾಡುತ್ತಿದ್ದು, ಯುವತಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಕಳುಹಿಸಕೊಡಲಾಗಿದೆ.