ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್`ಗೆ ತಂದೆ ಹೇಳಿದ ಕಿವಿಮಾತು
ಉತ್ತರಪ್ರದೇಶ ಸಿಎಂ ಆಗಿ ಅಚ್ಚರಿಕರ ರೀತಿಯಲ್ಲಿ ಆಯ್ಕೆಯಾದ ಯೋಗಿ ಆದಿತ್ಯನಾಥ್`ಗೆ ಅವರ ತಂದೆ ನಿವೃತ್ತ ಫಾರೆಸ್ಟ್ ರೇಂಜರ್, 84 ವರ್ಷದ ಆನಂದ್ ಸಿಂಗ್ ಕಿವಿಮಾತು ಹೇಳಿದ್ದಾರೆ.
ನನ್ನ ಮಗನಿಗೆ ಅತಿ ಹೆಚ್ಚು ಜವಾಬ್ದಾರಿ ಇದೆ. ತ್ರಿಬಲ್ ತಲಾಖ್ ಮತ್ತು ತಮ್ಮ ರಕ್ಷಣೆ ಮಾಡುತ್ತಾರೆಂಬ ನಂಬಿಕೆಯಿಂದ ಮುಸಲ್ಮಾನ್ ಮಹಿಳೆಯರು ಬಿಜೆಪಿಗೆ ಮತ ಹಾಕಿದ್ದಾರೆ. ಎಲ್ಲ ವರ್ಗದ ಜನ ಅಭಿವೃದ್ಧಿಗಾಗಿ ಮತ ಹಾಕಿದ್ದಾರೆ. ಅದನ್ನ ಉಳಿಸಿಕೊಳ್ಲಬೇಕಾದ ಜವಾಬ್ದಾರಿ ಮಗನ ಹೆಗಲ ಮೇಲಿದೆ ಎಂದಿದ್ದಾರೆ.