ಶನಿ ಶಿಂಗ್ಣಾಪುರ್ ಮತ್ತು ಹಾಜಿ ಅಲಿ ದರ್ಗಾ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ ಕೊಡಬೇಕು ಎಂದು ಪ್ರತಿಭಟನೆಗಳು ನಡೆದಿರುವ ಮಧ್ಯೆಯೇ, ಮಧ್ಯಪ್ರದೇಶದ ಗೃಹ ಸಚಿವ ಬಾಬುಲಾಲ್ ಗೌರ್ , ಮಹಿಳೆಯರು ಮನೆಯಲ್ಲಿ ದೇವರಿಗೆ ಕೈಮುಗಿದರೆ ಸಾಕು ದೇವಸ್ಥಾನಕ್ಕೆ ಹೋಗುವ ಅಗತ್ಯವಿಲ್ಲ ಎಂದು ಹೇಳಿಕೆ ನೀಡಿ ಮತ್ತೊಂದು ವಿವಾದಕ್ಕೆ ಕಾರಣವಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ಶನಿ ಶಿಂಗ್ಣಾಪುರ್ ದೇವಸ್ಥಾನದ ಪ್ರವೇಶಕ್ಕೆ ಒತ್ತಾಯಿಸಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿರುವ ಕುರಿತಂತೆ ಸುದ್ದಿಗಾರರು ಸಚಿವ ಬಾಬುಲಾಲ್ ಗೌರ್ ಅವರಿಗೆ ಪ್ರತಿಕ್ರಿಯೆ ಕೇಳಿದಾಗ, ಮಹಿಳೆಯರು ಮನೆಯಲ್ಲಿ ದೇವರಿಗೆ ಕೈಮುಗಿದರೆ ಸಾಕು ಎಂದು ಹೇಳಿದ್ದಾರೆ.