ತಮ್ಮ ರಾಜಕೀಯ ಜೀವನದಲ್ಲಿ ಹೊಸ ಹೆಜ್ಜೆ ಇಡುವ ದೃಷ್ಟಿಯಿಂದ ಇವರಿಬ್ಬರು ಏಪ್ರಿಲ್ 14, ಬಿ.ಆರ್.ಅಂಬೇಡ್ಕರ್ ಜನ್ಮದಿನದಂದು ತಮ್ಮ ಬೆಂಬಲಿಗರ ಜತೆ ರಾಷ್ಟ್ರೀಯ ಸಮಾಲೋಚನೆ ನಡೆಸಲಿದ್ದಾರೆ. ಸಭೆಯಲ್ಲಿ ಯಾದವ್, ಭೂಷಣ್ ಆಪ್ತರಾದ ಆಪ್ ಸದಸ್ಯರು, ಇತರ ಸಿವಿಲ್ ಸೊಸೈಟಿ ಮೂವ್ಮೆಂಟ್ ಸದಸ್ಯರು, ಎಎಪಿಯ ಮಾಜಿ ಆಂತರಿಕ ಲೋಕಪಾಲ ಅಡ್ಮಿರಲ್ ಎಲ್ ರಾಮದಾಸ್ ಮತ್ತು ನರ್ಮದಾ ಬಚಾವೊ ಆಂದೋಲನದ ಮೇಧಾ ಪಾಟ್ಕರ್ ಅವರನ್ನು ಆಹ್ವಾನಿಸಲಾಗುವುದು ಎಂದು ತಿಳಿದು ಬಂದಿದೆ.