ಕ್ರಿಕೆಟರ್ ಪರಿವರ್ತಿತ ನಟನನ್ನು ಪಂಚಕುಲದಿಂದ ಬಂಧಿಸಲಾಗಿದ್ದು , ಅತಿಕ್ರಮಣ ಪ್ರವೇಶ, ಕ್ರಿಮಿನಲ್ ಬೆದರಿಕೆ ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್ ಅಡಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್, ಪಂಚಕುಲದ ಪೊಲೀಸ್ ಉಪ ಆಯುಕ್ತ ರಾಹುಲ್ ಶರ್ಮಾ ಹೇಳಿದ್ದಾರೆ.
ಯೋಗರಾಜ್ ತಮ್ಮ ತುಟುಂಬ ಸದಸ್ಯರು ಮತ್ತು ಸಂಬಂಧಿಕರ ಜತೆಯಲ್ಲಿ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದರು. ಬರ್ತ್ಡೇ ಪಾರ್ಟಿ ಮುಗಿದ ನಂತರ ಮನೆಗೆ ಬಂದ ಸಂಬಂಧಿಕರೆಲ್ಲ ಹಿಂತಿರುಗುತ್ತಿದ್ದ ಸಮಯದಲ್ಲಿ ಘಟನೆ ನಡೆದಿದೆ. ಅವರ ಸಂಬಂಧಿಕರು ಕಾರ್ ಪಾರ್ಕಿಂಗ್ಗೆ ಸಂಬಂಧಿಸಿದಂತೆ ಸಿಂಗ್ ನೆರೆಹೊರೆಯವರ ಬಳಿ ವಾದಕ್ಕಿಳಿದಿದ್ದಾರೆ. ಆಗ ತಮ್ಮ ಸಂಬಂಧಿಕರ ಪರ ಮಾತನಾಡಲು ಸಿಂಗ್, ಮತ್ತಿಬ್ಬರು ಸ್ಥಳಕ್ಕೆ ಬಂದರು.