ಮಾಜಿ ರಾಷ್ಟ್ರಪತಿ, ವಿಜ್ಞಾನಿ, ಮೆಚ್ಚಿನ ಅಬ್ದುಲ್ ಕಲಾಂ ನಿಧನದಿಂದ ಸಂಪೂರ್ಣ ದೇಶವೇ ಶೋಕದಲ್ಲಿ ಮುಳುಗಿದೆ. ಪುಟ್ಟ ಪುಟ್ಟ ಮಕ್ಕಳು ಸಹ ಊಟ- ತಿಂಡಿ ತ್ಯಜಿಸಿ ಅಳುತ್ತಿರುವ ವರದಿಗಳು ಸಹ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಆದರೆ ಚೆನ್ನೈನ ಯುವಕನೊಬ್ಬ ಕಲಾಂ ಅವರ ಅಗಲಿಕೆ ಸಹಿಸಲಾಗದೆ ಜೀವವನ್ನೇ ತೆಗೆದುಕೊಂಡಿದ್ದಾನೆ.
ಆತನ ಕೋಣೆಯಲ್ಲಿ ಡೆತ್ ನೋಟ್ ಕೂಡ ಸಿಕ್ಕಿದ್ದು, "ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಜೀವನ ಮೆಚ್ಚಿನ ಕಲಾಂಗೆ, ಸ್ನೇಹಿತರಿಗೆ, ದೇಶಕ್ಕೆ ಮುಡಿಪು. ಯುವಕರು, ವಿದ್ಯಾರ್ಥಿಗಳು ತಮ್ಮ ಬದುಕನ್ನು ಕಲಾಂ ಅವರ ಕನಸನ್ನು ನನಸಾಗಿಸಲು ತಮ್ಮ ಜೀವನವನ್ನು ಮುಡಿಪಾಗಿಡಬೇಕು ಎಂಬುದು ನನ್ನ ಕೊನೆಯಾಸೆ", ಎಂದಾತ ಬರೆದಿದ್ದಾನೆ ಎಂದು ಆ ವಿಭಾಗದ ಪೊಲೀಸ್ ಠಾಣಾಧಿಕಾರಿ ಮುತ್ತು ಕುಮಾರ್ ತಿಳಿಸಿದ್ದಾರೆ.