ದೇವೇಗೌಡರಿಗೆ ಸವಾಲ್ ಹಾಕಿದ ಜಮೀರ್ ಖಾನ್

ಸೋಮವಾರ, 8 ಫೆಬ್ರವರಿ 2016 (20:45 IST)
ದೇವೇಗೌಡರು ನನ್ನನ್ನು ಮೀರಸಾದಿಕ್, ತಾಲಿಬಾನ್, ಐಎಸ್ಐ ಏಜೆಂಟ್ ಏನು ಬೇಕಾದರೂ ಕರೆಯಿಲಿ. ಆದರೆ, ಮುಸ್ಲಿಮರ ಹಿತದೃಷ್ಟಿಯಿಂದ ಚುನಾವಣೆ ಪ್ರಚಾರಕ್ಕೆ ತೆರಳುತ್ತಿಲ್ಲ ಎಂದು ಜೆಡಿಎಸ್ ಮುಖಂಡ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
 
ಹಜ್ ವಿಷಯದಲ್ಲಿ ದೇವೇಗೌಡರಿಗೆ ಲೆಕ್ಕ ಕೊಡುವ ಅಗತ್ಯವಿಲ್ಲ. ಅಲ್ಲಾನಿಗೆ ಲೆಕ್ಕ ಕೊಟ್ಟರೆ ಸಾಕು. ಅಗತ್ಯವೆನಿಸಿದಲ್ಲಿ ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ ಎಂದರು.
 
ನನ್ನನ್ನು ದೇವೇಗೌಡರು ಮೀರ್ ಸಾಧಿಕ್‌ಗೆ ಹೋಲಿಸಿದ್ದಾರೆ. ಮೀರ್ ಸಾಧಿಕ್‌ನಂತೆ ಹಿಂದಿನಿಂದ ದೇವೇಗೌಡರಿಗೆ ವಂಚಿಸಿಲ್ಲ. ಕೇವಲ ಮುಸ್ಲಿಂ ಸಮುದಾಯದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಪ್ರಚಾರಕ್ಕೆ ತೆರಳುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
 
ನನ್ನ ವರ್ತನೆಯನ್ನು ದೇವೇಗೌಡರು ಪಕ್ಷ ವಿರೋಧಿ ಚಟುವಟಿಕೆ ಎಂದೂ ಕರೆಯಬಹುದು. ಆದರೆ, ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಜೆಡಿಎಸ್ ಮುಖಂಡ ಜಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ