ಗಣರಾಜ್ಯೋತ್ಸವ ಪೆರೇಡ್ ಗೆ ಈ ಬಾರಿ ಕರ್ನಾಟಕದ ಸ್ಪೆಷಾಲಿಟಿ ಏನು ಗೊತ್ತಾ?

ಶುಕ್ರವಾರ, 19 ಜನವರಿ 2018 (16:26 IST)
ನವದೆಹಲಿ: ಪ್ರತಿವರ್ಷದಂತೇ ಈ ವರ್ಷವೂ ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್ ಗೆ ಕರ್ನಾಟಕದಿಂದ ಸ್ತಬ್ದ ಚಿತ್ರ ಪ್ರದರ್ಶನಕ್ಕೆ ತಯಾರಿ ನಡೆದಿದೆ.
 

ಈ ಬಾರಿ ಕನ್ನಡ ನಾಡಿನ ಜೀವ ವೈಭವ ಪ್ರದರ್ಶನಗೊಳ್ಳಲಿದೆ. ಇದಕ್ಕಾಗಿ ಈಗಾಗಲೇ ತಯಾರಿ ನಡೆದಿದ್ದು, ಖ್ಯಾತ ಕಲಾವಿದ ಶಶಿಧರ ಅಡಪ ನಿರ್ದೇಶನದಲ್ಲಿ ಕಲಾಕೃತಿ ನಿರ್ಮಾಣಗೊಳ್ಳುತ್ತಿದೆ. ಇದಕ್ಕಾಗಿ 50,00,000 ರೂ. ವೆಚ್ಚ ಮಾಡಲಾಗುತ್ತಿದೆ.

ವಾರ್ತಾ ಇಲಾಖೆಯ ಪರಿಕಲ್ಪನೆಯಲ್ಲಿ ನವಿಲು, ಹುಲಿ, ಆನೆ ಸೇರಿದಂತೆ ಕರ್ನಾಟಕದ ಜೀವ ವೈವಿದ್ಯಗಳ ಸ್ತಬ್ದ ಚಿತ್ರ ಪ್ರೇಕ್ಷಕರ ಗಮನ ಸೆಳೆಯಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ