ಕೊನೆಗೂ ಕ್ಷಮೆ ಕೇಳಿದ ಡ್ರಾಮಾ ಜ್ಯೂನಿಯರ್ಸ್

ಸೋಮವಾರ, 14 ಆಗಸ್ಟ್ 2017 (07:55 IST)
ಬೆಂಗಳೂರು: ಬ್ರಾಹ್ಮಣರ ಬಗ್ಗೆ ಅವಹೇಳನಕಾರಿಯಾಗಿ ತೋರಿಸಿದ ಡ್ರಾಮಾ ಜ್ಯೂನಿಯರ್ಸ್ ಕೊನೆಗೂ ಪ್ರತಿಭಟನೆಗೆ ಮಣಿದು ಕ್ಷಮೆ ಯಾಚಿಸಿದೆ.

 
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ರಾಮಾ ಜ್ಯೂನಿಯರ್ಸ್ ರಿಯಾಲಿಟಿ ಶೋನಲ್ಲಿ ಬ್ರಾಹ್ಮಣ ಸಮುದಾಯವರಿಗೆ ಅವಹೇಳನ ಮಾಡುವಂತಹ ದೃಶ್ಯ ತೋರಿಸಲಾಗಿತ್ತುಎಂದು ಆರೋಪಿಸಲಾಗಿತ್ತು.

ಈ ಹಿನ್ನಲೆಯಲ್ಲಿ ಪೇಜಾವರ ಶ್ರೀ ಸೇರಿದಂತೆ ಬ್ರಾಹ್ಮಣ ಸಮುದಾಯವೇ ಸಿಡಿದು ನಿಂತಿತ್ತು. ಕ್ಷಮೆ ಕೇಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು. ಹೀಗಾಗಿ ನಿರೂಪಕ ಆನಂದ್ ಮತ್ತು ತೀರ್ಪುಗಾರರ ಪರವಾಗಿ ಸಿತಾರಾಂ ಬೇಷರತ್ ಕ್ಷಮೆ ಯಾಚಿಸಿದ್ದಾರೆ.

ಇದನ್ನೂ ಓದಿ.. ಧೋನಿ ಎಂದರೆ ಸ್ಪೆಷಲ್ ಯಾಕೆ ಗೊತ್ತಾ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ