ಕೊನೆಗೂ ವೀಕೆಂಡ್ ವಿತ್ ರಮೇಶ್ ನಲ್ಲಿ ವೀಕ್ಷಕರ ಆಸೆ ನೆರವೇರಿತು

ಶನಿವಾರ, 25 ಮೇ 2019 (07:38 IST)
ಬೆಂಗಳೂರು: ಜೀ ಕನ್ನಡದಲ್ಲಿ ರಮೇಶ್ ಅರವಿಂದ್ ನಿರೂಪಿಸುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ವೀಕ್ಷಕರ ಆಸೆ ಕೊನೆಗೂ ನೆರವೇರಿದೆ.


ಯಾವಾಗಲೂ ಕಾರ್ಯಕ್ರಮದಲ್ಲಿ ಸಾಧಕರ ಸೀಟ್ ಗೆ ಸಿನಿಮಾದವರನ್ನೇ ಕರೆತರುತ್ತೀರಿ. ಅದೂ ಸಣ್ಣ ಪುಟ್ಟ ನಟರನ್ನೆಲ್ಲಾ ಕರೆದು ಸಾಧಕರು ಎಂದು ಬಿಂಬಿಸುತ್ತೀರಿ ಎಂದೆಲ್ಲಾ ವೀಕ್ಷಕರು ಆಕ್ಷೇಪ ವ್ಯಕ್ತಪಡಿಸುತ್ತಲೇ ಇದ್ದರು.

ಇದೀಗ ಕೊನೆಗೂ ವೀಕ್ಷಕರ ಆಸೆಯಂತೆ ಇನ್ ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರನ್ನು ಕರೆತರಲಾಗಿದೆ. ಈ ಎಪಿಸೋಡ್ ಈ ವಾರ ಪ್ರಸಾರವಾಗಲಿದೆ. ಅಸಲಿಗೆ ಸುಧಾ ಮೂರ್ತಿಯವರನ್ನು ಕರೆತರಬೇಕು ಎಂದು ವೀಕ್ಷಕರು ಒತ್ತಾಯಿಸುತ್ತಲೇ ಇದ್ದರು.

ಇದೀಗ ಸುಧಾ ಮೂರ್ತಿ ಬದಲಿಗೆ ಅವರ ಪತಿ ನಾರಾಯಣ ಮೂರ್ತಿಯವರನ್ನು ಅತಿಥಿಯಾಗಿ ಬರಮಾಡಿಕೊಳ್ಳಲಾಗಿದೆ. ಬಹುಶಃ ಮುಂದಿನ ದಿನಗಳಲ್ಲಿ ಸುಧಾ ಮೂರ್ತಿ ಕೂಡಾ ಸಾಧಕರ ಸೀಟ್ ನಲ್ಲಿ ಕೂರಬಹುದೇನೋ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ