ಕೃಷ್ಣಗೆ ವಿದೇಶಕ್ಕೆ, ಮಮತಾಗೆ ರೈಲು, ಪ್ರಣಬ್‌ಗೆ ವಿತ್ತ

ರಾಜ್ಯ ಸಭಾ ಸದಸ್ಯ ಎಸ್.ಎಂ.ಕೃಷ್ಣ ಅವರಿಗೆ ವಿದೇಶಾಂಗ ಖಾತೆ ಘೋಷಿಸಲಾಗಿದ್ದು, ಪಿ.ಚಿದಂಬರಂ ಗೃಹ ಮತ್ತು ಪ್ರಣಬ್ ಮುಖರ್ಜಿ ಅವರಿಗೆ ವಿತ್ತ ಖಾತೆ ನೀಡಲಾಗಿದೆ. ಶನಿವಾರ ಆರು ಮಂದಿ ಸದಸ್ಯರಿಗೆ ಖಾತೆ ಹಂಚಿಕೆ ನಡೆದಿದೆ.

ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ರೈಲ್ವೇ ಸಚಿವಾಲಯದ ಹೊಣೆ ಹೊರಿಸಲಾಗಿದ್ದರೆ, ಶರದ್ ಪವಾರ್ ಕೃಷಿ ಖಾತೆಯನ್ನು ಹಾಗೂ ಎ.ಕೆ.ಆಂಟನಿ ಅವರು ರಕ್ಷಣಾ ಖಾತೆಯನ್ನು ಉಳಿಸಿಕೊಂಡಿದ್ದಾರೆ ಎಂದು ರಾಷ್ಟ್ರಪತಿ ಭವನ ಮೂಲಗಳು ತಿಳಿಸಿವೆ.

ಇನ್ನೂ ವಿತರಣೆಯಾಗದೆ ಬಾಕಿ ಉಳಿದಿರುವ ಖಾತೆಗಳ ಹೊಣೆಯನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರೇ ನಿರ್ವಹಿಸಲಿದ್ದಾರೆ. ಹೊಸ ಸಂಪುಟದ ಮೊದಲ ವಿಸ್ತರಣೆ ವೇಳೆ ಸೇರ್ಪಡೆಯಾಗಲಿರುವ ಸಚಿವರು ಹಾಗೂ ಉಳಿದವರ ಖಾತೆಗಳನ್ನು ಘೋಷಿಸಲಾಗುತ್ತದೆ ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ