ಈ ಬೌಲರ್ ಈಗ ಶ್ರೀಲಂಕಾದ ರಾಜ್ಯಪಾಲ

ಶುಕ್ರವಾರ, 29 ನವೆಂಬರ್ 2019 (07:37 IST)
ಕೊಲಂಬೊ :  ಶ್ರೀಲಂಕಾ ತಂಡದ ಖ್ಯಾತ ಬೌಲರ್ ಮಾಜಿ ಕ್ರಿಕೆಟಿಗರೊಬ್ಬರನ್ನು ಶ್ರೀಲಂಕಾದ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ.


ಹೌದು. ಅತಿ ಹೆಚ್ಚು ವಿಕೆಟ್ ಪಡೆದ ಖ್ಯಾತ ಬೌಲರ್ ಎಂಬ ಹೆಸರು ಪಡೆದ ಶ್ರೀಲಂಕಾದ ಮಾಜಿ  ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರನ್ನು ಸೇರಿದಂತೆ ಮೂವರನ್ನು ಶ್ರೀಲಂಕಾದ  ಅಧ್ಯಕ್ಷರಾದ ಗೊಟಬಯ ರಾಜಪಕ್ಸೆ ಅವರು ನೂತನ ರಾಜ್ಯಪಾಲರಾಗಿ ನೇಮಕ ಮಾಡಿದ್ದಾರೆ.

 

ಉತ್ತರ ಪ್ರಾಂತ್ಯಕ್ಕೆ ಮುತ್ತಯ್ಯ ಮುರಳೀಧರನ್ ರಾಜ್ಯಪಾಲರಾಗಿ ಆಯ್ಕೆಯಾದರೆ, ಅನುರಾಧ ಯಮಾನ್ ಪಾತ್  ಅವರು ಪೂರ್ವ ಪ್ರಾಂತ್ಯಕ್ಕೆ ರಾಜ್ಯಪಾಲರಾಗಿ ಆಯ್ಕೆಯಾದ್ದಾರೆ. ಹಾಗೇ ತಿಸಾ ವಿಥಾರಾನಾ ಅವರನ್ನು ಉತ್ತರ ಮಧ್ಯ ಪ್ರಾಂತ್ಯದ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ