ಸಿದ್ದರಾಮಯ್ಯಗೆ ನೀರಿಳಿಸಿದ ಕೈ ಮುಖಂಡ

ಗುರುವಾರ, 26 ಸೆಪ್ಟಂಬರ್ 2019 (16:05 IST)

ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಕೈ ಪಾಳೆಯದ ಮುಖಂಡರೇ ಸಭೆಯಲ್ಲಿ ನೀರಿಳಿಸಿದ ಘಟನೆ ನಡೆದಿದೆ.

ಬೈ ಎಲೆಕ್ಷನ್ ಬಂದಿರೋದ್ರಿಂದ ಕೈ ಪಡೆ ಚುನಾವಣೆ ಸಭೆ ಆಯೋಜಿಸಿತ್ತು. ಆದರೆ ಕಾಂಗ್ರೆಸ್ ನಾಯಕರೇ ಪರಸ್ಪರ ಕಚ್ಚಾಡಿಕೊಂಡಿದ್ದಾರೆ ಎಂದು ಸುದ್ದಿಹರಿದಾಡುತ್ತಿದೆ.

ರೋಷನ್ ಬೇಗ್ ವಿರುದ್ಧ ಕೈಗೊಂಡ ಕ್ರಮ ರಮೇಶ್ ಕುಮಾರ್ ವಿರುದ್ಧ ಯಾಕೆ ತೆಗೆದುಕೊಂಡಿಲ್ಲ ಅಂತ ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ಗರಂ ಆದರು. ಆ ವೇಳೆ ಮಧ್ಯೆ ಪ್ರವೇಶಿಸಿದ ಸಿದ್ದರಾಮಯ್ಯ ವಿರುದ್ಧವೂ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ದಿನೇಶ್ ಗುಂಡೂರಾವ್ ಹಾಗೂ ಸಿದ್ದರಾಮಯ್ಯ ವಿರುದ್ಧ ಕೆಲವು ಹಿರಿಯ ಮುಖಂಡರೇ ಮುನಿಸಿಕೊಂಡಿದ್ದು, ಇದೀಗ ಒಂದಷ್ಟು ಜನರು ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ