ತೆಲಂಗಾಣ ಮಸೂದೆ ಮಂಡನೆಯಾಗಿಲ್ಲ ಅಂದ್ರು ಸುಷ್ಮಾ ಸ್ವರಾಜ್

ಗುರುವಾರ, 13 ಫೆಬ್ರವರಿ 2014 (16:40 IST)
PR
PR
ನವದೆಹಲಿ: ತೆಲಂಗಾಣ ಮಸೂದೆ ವಿರೋಧಿಸಿ ಸಂಸತ್ತಿನಲ್ಲಿ ತೀವ್ರ ಗದ್ದಲ, ಗೌಜು ನಡೆಯುತ್ತಿದ್ದ ನಡುವೆ ತೆಲಂಗಾಣ ಮಸೂದೆಯನ್ನು ಮಂಡನೆ ಮಾಡಿದ್ದಾಗಿ ಸರ್ಕಾರ ಘೋಷಿಸಿದೆ. ಆದರೆ ತಾವು ಸದನದಲ್ಲಿ ಇರುವಷ್ಟು ಹೊತ್ತು ಮಂಡನೆಯಾಗಿಲ್ಲ. ಕೇಂದ್ರ ಸರ್ಕಾರವು ಸದನದಲ್ಲಿ ಮಂಡನೆಯಾಗಿದೆ ಎಂದು ಹೇಳ್ತಿದೆ. ಸಂಸತ್‌ನಲ್ಲಿ ಪ್ರತ್ಯೇಕ ರಾಜ್ಯ ತೆಲಂಗಾಣ ರಚನೆಯ ಮಸೂದೆ ಮಂಡನೆಯೇ ಆಗಿಲ್ಲ ಎಂದು ಸುಷ್ಮಾ ಹೇಳಿದರು.

ಯಾವಾಗ ಮಂಡನೆಯಾಗಿದೆ ಅನ್ನೋದು ನನಗಂತೂ ಗೊತ್ತಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು. ಈ ಬಗ್ಗೆ ಎಂದೆಂದಿಗೂ ಕೇಂದ್ರಸರ್ಕಾರದ ಜತೆ ಮಾತುಕತೆ ನಡೆಸಲ್ಲ ಎಂದು ನವದೆಹಲಿಯಲ್ಲಿ ವಿಪಕ್ಷನಾಯಕಿ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ