ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಮೂರ್ಖ ಮತ್ತು ದುರ್ನಡತೆಯ ವ್ಯಕ್ತಿ ಎಂದು ಯೋಗಾ ಗುರು ಬಾಬಾ ರಾಮದೇವ್ ಆರೋಪಿಸಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ ನಾಗರಿಕ ಸಮಿತಿಯ ಸದಸ್ಯರನ್ನು ರಾಕ್ಷಸಪುತ್ರರು ಎಂದು ದಿಗ್ವಿಜಯ್ ಸಿಂಗ್ ಕಿಡಿಕಾರಿದ್ದರು.
ಯೋಗಾ ಗುರು ಬಾಬಾ ರಾಮದೇವ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಮೂರ್ಖ ಮತ್ತು ದುರ್ನಡತೆಯ ವ್ಯಕ್ತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಸಮಾಧಿ ಮಾಡಲು ದಿಗ್ವಿಜಯ್ ಸಿಂಗ್ ಕಾತುರರಾಗಿದ್ದಾರೆ. ಆದ್ದರಿಂದ, ಮನಬಂದಂತೆ ಹೇಳಿಕೆ ನೀಡಿ ಇಂದಿನ ಭಾರತದ ರಾಜಕಾರಣದಲ್ಲಿ ಜೋಕರ್ ಎಂದು ಹೆಸರುವಾಸಿಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿಯ ವರ್ತನೆ ತುಂಬಾ ಹೀನಾಯವಾಗಿದೆ ಎಂದು ಬಾಬಾ ರಾಮದೇವ್ ವ್ಯಂಗ್ಯವಾಡಿದ್ದಾರೆ.