ಕಿರಣ್ ಬೇಡಿಗೆ ದೆಹಲಿ ಸಿಎಂ ಸ್ಥಾನ: ಉಲ್ಟಾ ಹೊಡೆದ ನಿತಿನ್ ಗಡ್ಕರಿ

ಬುಧವಾರ, 16 ಏಪ್ರಿಲ್ 2014 (14:44 IST)
ಮಾಜಿ ಐಪಿಎಸ್ ಅಧಿಕಾರಿ ಮತ್ತು ಸಾಮಾಜಿಕ ಕಾರ್ಯಕರ್ತೆ ಕಿರಣ್ ಬೇಡಿ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿಯ ಅಭ್ಯರ್ಥಿಯಾಗಬಹುದು ಎಂದು ಬೆಳಿಗ್ಗೆ ಟ್ವೀಟ್ ಮಾಡಿದ್ದ ಬಿಜೆಪಿ ಮುಖಂಡ ನಿತಿನ್ ಗಡ್ಕರಿ ಇದೀಗ ಉಲ್ಟಾ ಹೊಡೆದಿದ್ದು, ನಾನು ಹಾಗೇ ಟ್ವೀಟ್ ಮಾಡಿಯೇ ಇಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.
PTI

ಈ ಟ್ವೀಟ್, ನಿತಿನ್ ಗಡ್ಕರಿ ಟ್ವಿಟರ್ ಖಾತೆಯಿಂದ ಪ್ರಕಟವಾಗಿದೆ ಎಂದು ಮೊದಲು ಭಾವಿಸಲಾಗಿತ್ತು. ಆದರೆ ವಾಸ್ತವವಾಗಿ ಅದು ಒಂದು ಅಣಕ (ಫೇಕ್) ಖಾತೆ ಎಂದು ಬಿಜೆಪಿಯ ಮಾಜಿ ಮುಖ್ಯಸ್ಥರು ಬುಧವಾರ ಹೇಳಿದರು.

ಈ ಗಾಳಿಸುದ್ದಿಯನ್ನು ಅಲ್ಲಗಳೆದ ಅವರು ದೆಹಲಿ ಅಸೆಂಬ್ಲಿಗೆ ಬಿಜೆಪಿಯ ಸಂಭಾವ್ಯ ಅಭ್ಯರ್ಥಿಗೆ ಸಂಬಂಧಿಸಿದಂತೆ ನಾನು ಹೇಳಿದ್ದೇನೆ ಎಂಬಂತೆ ಮಿಥ್ಯ ಮತ್ತು ಕೃತ್ರಿಮ ಟ್ವೀಟ್ ಮಾಡಲಾಗಿತ್ತು. ಈ ಸ್ವಯಂಘೋಷಿತ ಟ್ವೀಟ್‌ಗೆ ಮತ್ತು ನನಗೆ ಅಥವಾ ಬಿಜೆಪಿಗೆ ಏನೂ ಸಂಬಂಧವಿಲ್ಲ. ಸಾಮಾಜಿಕ ಮಾಧ್ಯಮದ ದುರ್ಬಳಕೆ ಯಾಗಿರುವ ಈ ನಕಲಿ ಖಾತೆಯಿಂದ ರಚಿತವಾದ ಈ ಟ್ವಿಟ್‌ ನಂಬಲರ್ಹವಾದುದಲ್ಲ.ನನ್ನ ಅಧಿಕೃತ ಟ್ವಿಟರ್ ಖಾತೆ @ nitin_gadkari ಆಗಿದೆ " ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ