ದೇಶದ ಅಭಿವೃದ್ಧಿಗೆ ಸತತ ಮೂರನೇ ಬಾರಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವ ಅಗತ್ಯವಿದೆ, ತಮ್ಮ ಸರಕಾರ ಆಡಳಿತದ ಚುಕ್ಕಾಣಿ ಹಿಡಿದರೆ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿಯನ್ನು ಗುಜರಾತ್ ಗಲಭೆ ಪ್ರಕರಣಕ್ಕೆಸಂಬಂಧಿಸಿದಂತೆ ಜೀವನಪೂರ್ತಿ ಜೈಲಿಗೆ ಕಳುಹಿಸಲಾಗುವುದು ಎಂದು ಕೇಂದ್ರ ಉಕ್ಕು ಮಂತ್ರಿ ಬೇನಿ ವರ್ಮಾ ಹೇಳಿದ್ದಾರೆ.
PTI
ಗೊಂಡಾದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರ ಮಾತನಾಡುತ್ತಿದ್ದ ಅವರು "ಪಂಜಾಬಿನಲ್ಲಿ ಪಗಡಿ, ತಮಿಳುನಾಡಿನಲ್ಲಿ ಲುಂಗಿಯನ್ನು ಉಟ್ಟುಕೊಂಡು ಜನರನ್ನು ಯಾಮಾರಿಸುವ ಪ್ರಯತ್ನ ಮಾಡುತ್ತಿರುವ ಮೋದಿ ವಾಸ್ತವವಾಗಿ ಬಹುರೂಪಿ. ಗುಜರಾತ್ನಲ್ಲಿ ಸಾರ್ವಜನಿಕ ಹತ್ಯಾಕಾಂಡ ಮಾಡಿರುವ ಮೋದಿಯನ್ನು ಜನರು ಸಂಪೂರ್ಣವಾಗಿ ತಿರಸ್ಕರಿಸುತ್ತಾರೆ ಮತ್ತು ಪ್ರಧಾನಿಯಾಗುವ ಕನಸನ್ನು ನನಸಾಗಲು ಬಿಡುವುದಿಲ್ಲ" ಎಂದು ತಿಳಿಸಿದರು.
ಲೋಕಸಭಾ ಚುನಾವಣೆಯ ನಂತರ ಕೇಂದ್ರದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೇರಲಿದೆ. ಆಗ ಮೋದಿಯನ್ನು ಗುಜರಾತ್ ದಂಗೆ ಕೇಸ್ನಲ್ಲಿ ಜೀವಮಾನ ಪೂರ್ತಿ ಜೈಲಿಗೆ ಕಳುಹಿಸುತ್ತೇವೆ ಎಂದು ವರ್ಮಾ ಹೇಳಿದರು.
ಜಾತಿವಾದ ಮತ್ತು ಕೋಮುವಾದಿ ಶಕ್ತಿಗಳು ದೇಶವನ್ನು ನಾಶಗೊಳಿಸುತ್ತವೆ. ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಮೂರನೇ ಬಾರಿ ಅಧಿಕಾರಕ್ಕೇರುವ ಅಗತ್ಯವಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.