ನಿತ್ಯಾನಂದ ರಾಸಲೀಲೆ ಪ್ರಕರಣದ ಸಂದರ್ಭದಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾದ ಪಾಸ್ಪೋರ್ಟ್ನ್ನು ಹಿಂಪಡೆಯಲು ಸ್ವತಃ ರಾಮನಗರ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾದ ಸ್ವಾಮಿ ನಿತ್ಯಾನಂದ, 10 ಸಾವಿರ ರೂ. ಬಾಂಡ್ ಸಲ್ಲಿಸಿ, ಮುಚ್ಚಳಿಕೆ ಪತ್ರ ಬರೆದುಕೊಟ್ಟು ಪಾಸ್ಪೋರ್ಟ್ ಹಿಂಪಡೆದರು.
ಪಾಸ್ಪೋರ್ಟ್ ಮುಟ್ಟುಗೋಲು ಹಾಕಿಕೊಂಡಿರುವ ಕ್ರಮವನ್ನು ಪ್ರಶ್ನಿಸಿ ಸ್ವಾಮಿ ನಿತ್ಯಾನಂದ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ನಿಗಧಿತ ಬಾಂಡ್ ಸಲ್ಲಿಸಿ ಪಾಸ್ಪೋರ್ಟ್ ಹಿಂಪಡೆಯಬಹುದು, ಆದರೆ ವಿದೇಶಗಳಿಗೆ ಹೋಗುವುದಕ್ಕೆ ಸ್ಥಳೀಯ ನ್ಯಾಯಾಲಯದ ಅನುಮತಿ ಪಡೆಯಬೇಕು ಎಂದು ಹೈಕೋರ್ಟ್ ಷರತ್ತು ವಿಧಿಸಿ ತೀರ್ಪು ನೀಡಿತ್ತು.