ಒಂದೆಡೆ ಬಹುನಿರೀಕ್ಷೆಯ ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ ಆರಂಭಗೊಂಡಿದ್ದರೆ ಮತ್ತೊಂದೆಡೆ ಸ್ಮೈಲ್ ಸಿಎಂ ಸದಾನಂದ ಗೌಡರು ತಮ್ಮ 59ನೇ ವರ್ಷದ ಹುಟ್ಟು ಹಬ್ಬ ಸಂಭ್ರಮಿಸುತ್ತಾ ಮಠ ದೇವಾಲಯಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆಯುತ್ತಿದ್ದಾರೆ.
ಅದೃಷ್ಟದಿಂದ ಮುಖ್ಯಮಂತ್ರಿಯಾಗಿ ಸದಾ ನಗುನಗುತ್ತಾ ಕಾರ್ಯನಿರ್ವಹಿಸುತ್ತಿರುವ ಸದಾನಂದ ಗೌಡರು ರಾಜ್ಯದ ರೈತರನ್ನೂ ಸಂತೋಷಪಡಿಸುವಂತಾ ಬಜೆಟ್ ಮಂಡಿಸಿ ನಾನೂ ಮಣ್ಣಿನ ಮಗ ಎನಿಸಿಕೊಳ್ಳುವಂತೆ ಮಾಡಲಿ ಎಂದು ಹಾರೈಸಿ.
ಕಾಲೆಳೆಯುವವರನ್ನು ಕಡೆಗಣಿಸಿ ಬದಿಗೊತ್ತಿ, ಆರು ಕೋಟಿ ಕನ್ನಡಿಗರ ಹಿತಕಾಯುವ ರಾಜ್ಯಾಡಳಿತ ನೀಡುವ ಸಾಮರ್ಥ್ಯ ಅವರಿಗೆ ಬರಲಿ ಎಂದು ಶುಭ ಹಾರೈಸಿಬಿಡಿ.