ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಚುನಾವಣೆ ಆರಂಭವಾಗಿದ್ದು ಒಂದೇ ಹಂತದಲ್ಲಿ ಮುಕ್ತಾಯವಾಗಲಿದೆ.
PR
ಶಿವಮೊಗ್ಗದಿಂದ ಕಣಕ್ಕಿಳಿದಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬೆಳಿಗ್ಗೆ 7 ಗಂಟೆಗೆ ಮತಗಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ಕುಟುಂಬ ಸಮೇತರಾಗಿ ಮತ ಚಲಾಯಿಸಿದರು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಆಡಳಿತ ಸೌಧದಲ್ಲಿ ಯಡಿಯೂರಪ್ಪ ಮತ ಚಲಾಯಿಸಿದರು.
ತುಮಕೂರಿನಲ್ಲಿ ಶ್ರೀ ಸಿದ್ಧಗಂಗಾ ಸ್ವಾಮಿಗಳು ಕೂಡ ಬೆಳ್ಳಂ ಬೆಳ್ಳಿಗೆ ಮತವನ್ನು ಚಲಾಯಿಸಿದ್ದಾರೆ. ಮಠದ ಕಿರಿಯ ಸ್ವಾಮಿಗಳು ಕೂಡ ಮತದಾನ ಮಾಡಿದರು.
ಪುತ್ತೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಮತ ಚಲಾಯಿದರು.