ವರದಕ್ಷಿಣೆ ಕಿರುಕುಳ: ಮಹಿಳೆಯ ಮೇಲೆ ಹಲ್ಲೆ ಮಾಡಿ ರಸ್ತೆಯಲ್ಲಿ ಬಿಸಾಡಿದರು!

ಶುಕ್ರವಾರ, 18 ಏಪ್ರಿಲ್ 2014 (12:24 IST)
PR
PR
ಹುಬ್ಬಳ್ಳಿ: ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಪತಿಯ ಮನೆಯವರು ಗರ್ಭಿಣಿ ಮಹಿಳೆಗೆ ಥಳಿಸಿ ಪ್ರಜ್ಞೆ ತಪ್ಪಿದ ಮಹಿಳೆಯನ್ನು ರಸ್ತೆಯಲ್ಲಿ ಬಿಸಾಡಿರುವ ಹೃದಯವಿದ್ರಾವಕ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಕಲ್ಪನಾ ಎಂಬಾಕೆಗೆ ಅವಳ ಪತಿ ಮಂಜುವಿನ ತಮ್ಮ ಮತ್ತು ತಾಯಿ ಇಬ್ಬರೂ ಸೇರಿ ಹಲ್ಲೆ ಮಾಡಿ ಅವಳು ಪ್ರಜ್ಞೆ ತಪ್ಪಿದ ಬಳಿಕ ಕಾರವಾರದ ಬೈಪಾಸ್ ರಸ್ತೆಯಲ್ಲಿ ಬಿಸಾಡುವ ಮೂಲಕ ಅಮಾನವೀಯವಾಗಿ ವರ್ತಿಸಿದ್ದಾರೆ. 2 ವರ್ಷಗಳ ಹಿಂದೆ ಮನೆಯಿಂದ ಬಂಗಾರ ತಗೊಂಡು ಬಾ ಅಂತೇಳಿ ಕಳಿಸಿದ್ದಾಗ ತಂದಿದ್ದೆ. ಮತ್ತೆ ನನಗೆ ಹೊಡೆದು ಬಂಗಾರ, ಎರಡು ಲಕ್ಷ ರೂ. ಹಣವನ್ನು ತೆಗೆದುಕೊಂಡು ಬಾ ಎಂದು ಹೇಳಿ ಬೆಲ್ಟ್‌ನಿಂದ ಹೊಡೆಯುತ್ತಿದ್ದರು.

ಆಹಾರವನ್ನು ಕೊಡದೇ ಸತಾಯಿಸುತ್ತಿದ್ದರು, ನಾಯಿಗಿಂತ ಕೀಳಾಗಿ ತನ್ನನ್ನು ನೋಡಿಕೊಳ್ಳುತ್ತಿದ್ದರು ಎಂದು ಕಲ್ಪನಾ ದೂರಿದ್ದಾಳೆ. 2 ವರ್ಷದ ಹಿಂದೆ ಮಂಜು ಎಂಬವನನ್ನು ಕಲ್ಪನಾ ಮದುವೆಯಾಗಿದ್ದರು. ಮದುವೆಯಾದಾಗಿನಿಂದ ತವರುಮನೆಯಿಂದ ಒಡವೆ, ಹಣ ತರುವಂತೆ ಕಿರುಕುಳ ನೀಡುತ್ತಿದ್ದರು ಎಂದು ಕಲ್ಪನಾ ದೂರಿನಲ್ಲಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ