ಸಚಿವ ಆಂಜನೇಯ ಕೊಠಡಿಯಲ್ಲಿ ಗಾಂಧೀಜಿ ಫೋಟೋ ಮೂಲೆಗೆಸೆದರು!

ಶನಿವಾರ, 19 ಏಪ್ರಿಲ್ 2014 (15:29 IST)
PR
PR
ಬೆಂಗಳೂರು : ಸಮಾಜ ಕಲ್ಯಾಣ ಇಲಾಖೆ ಸಚಿವ ಆಂಜನೇಯ ಕೊಠಡಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಗೆ ಅವಮಾನ ಮಾಡಿದ ಘಟನೆ ನಡೆದಿದೆ. ಹಳೆಯ ಸಾಮಾನುಗಳ ಕೊಠಡಿಯಲ್ಲಿ ಗಾಂಧಿ ಜೊತೆಗೆ ನೆಹರು ಫೋಟೊವನ್ನು ಇರಿಸಿ ರಾಹುಲ್, ಸಿದ್ದರಾಮಯ್ಯ ಅವರ ಫೋಟೋಗಳು ಮಾತ್ರ ರಾರಾಜಿಸುವಂತೆ ಮಾಡಿದ್ದಾರೆ. ಸಚಿವ ಆಂಜನೇಯ ಕೊಠಡಿಯ ನವೀಕರಣಕ್ಕೆ ಲಕ್ಷಾಂತರ ರೂ. ಖರ್ಚು ಮಾಡುತ್ತಿದ್ದಾರೆ. ಆದರೆ ಗಾಂಧೀಜಿ ಫೋಟೊವನ್ನು ಮೂಲೆಗುಂಪು ಮಾಡಿದ ಇವರು ಯಾವ ರೀತಿ ಸಮಾಜ ಕಲ್ಯಾಣ ಮಾಡುತ್ತಾರೆ ಎನ್ನುವುದೇ ಪ್ರಶ್ನೆಯಾಗಿದೆ.

ಸೋನಿಯಾ, ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಫೋಟೋಗಳನ್ನು ಮಾತ್ರ ಕೊಠಡಿಯ ಗೋಡೆಗೆ ನೇತುಹಾಕಿ ಗಾಂಧೀಜಿ ಫೋಟೋವನ್ನು ಮೂಲೆಗೆ ಎಸೆದು ಅವಮಾನ ಮಾಡಿರುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಉದ್ಭವವಾಗಿದೆ.

ವೆಬ್ದುನಿಯಾವನ್ನು ಓದಿ