ದೀಪಾವಳಿ ಹಬ್ಬದ ದಿನ ಸರ್ಕಾರದ ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ; ಬಿಬಿಎಂಪಿಯಿಂದ ಹೊಸ ಪ್ಲ್ಯಾನ್

ಸೋಮವಾರ, 9 ನವೆಂಬರ್ 2020 (10:17 IST)
ಬೆಂಗಳೂರು : ದೀಪಾವಳಿ ಹಬ್ಬದ  ಆಚರಣೆಯ ಹಿನ್ನಲೆಯಲ್ಲಿ ಪಟಾಕಿ ಹೊಡೆಯುವವರ ಮೇಲೆ ಬಿಬಿಎಂಪಿ ಹದ್ದಿನ ಕಣ್ಣು ಇಟ್ಟಿದೆ.  

ಈಗಾಗಲೇ ಸರ್ಕಾರ ಹಸಿರು ಪಟಾಕಿ ಬಳಸುವಂತೆ ಆದೇಶಿಸಿದೆ. ಇಂದು ಸರ್ಕಾರದ ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಆದಕಾರಣ ದೀಪಾವಳಿ ಹಬ್ಬದ ದಿನ ಮಾರ್ಷಲ್ ಗಳಿಂದ ಸಿಟಿ ರೌಂಡ್ ಹಾಕಿಸಲಿದ್ದಾರೆ ಎನ್ನಲಾಗಿದೆ.

ಹಗೇ ಮನೆಯ ಮುಂದೆ ಪಟಾಕಿ ಸಿಡಿಸಿರುವುದರ ಸಾಕ್ಷ್ಯ ಸಿಕ್ಕರೆ ಕ್ರಮಕೈಗೊಳ್ಳಲಾಗುವುದು. ಅಲ್ಲದೇ ಪಟಾಕಿ ಕಸವನ್ನು ಆಯಾ ಮನೆಯವರೇ ಸ್ವಚ್ಚಗೊಳಿಸುವಂತೆ ಸೂಚಿಸಲಾಗಿದೆ. ಆ ಮೂಲಕ ಪಟಾಕಿ ತಡೆಗೆ ಕಠಿಣ ಕ್ರಮ ಕೈಗೊಳ್ಳಲು ಬಿಬಿಎಂಪಿ ಪ್ಲ್ಯಾನ್ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ