ಕನ್ನಡವೋ, ಇಂಗ್ಲಿಷ್ ನಲ್ಲೋ ಟ್ವೀಟ್ ಮಾಡಿ, ಹಿಂದಿ ನಂಗೆ ಅರ್ಥ ಆಗಲ್ಲ ಅಂದ್ರು ಸಿಎಂ ಸಾಹೇಬ್ರು!

ಭಾನುವಾರ, 22 ಏಪ್ರಿಲ್ 2018 (09:18 IST)
ಬೆಂಗಳೂರು: ಕನ್ನಡವೋ, ಇಂಗ್ಲಿಷ್ ನಲ್ಲೋ ಟ್ವೀಟ್ ಮಾಡಿ. ಹಿಂದಿ ನನಗೆ ಅರ್ಥ ಆಗಲ್ಲ! ಹಿಂದಿಯಲ್ಲಿ ತಮಗೆ ಟ್ವೀಟ್ ಮಾಡಿದ ಬಿಜೆಪಿ ವಕ್ತಾರ ಮುರಳೀಧರ್ ರಾವ್ ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ ಪರಿ ಇದು!

ಮುಂಬರುವ ವಿಧಾನಸಭೆ ಚುನಾವಣೆಗೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ತೀರ್ಮಾನಿಸಿದ ಸುದ್ದಿ ಹೊರಬರುತ್ತಿದ್ದಂತೆ ಮುರಳೀಧರ್ ರಾವ್ ಸಿಎಂ ಸಿದ್ದರಾಮಯ್ಯಗೆ ಟ್ವಿಟರ್ ನಲ್ಲಿ ಭಯದಿಂದಾಗಿ ಈ ನಿರ್ಧಾರಕ್ಕೆ ಬಂದಿರಾ ಎಂದು ಕಿಚಾಯಿಸಿದ್ದರು.

ಇದಕ್ಕೆ ಪ್ರತಿಕ್ರಿಯೆಯಾಗಿ ಸಿಎಂ ಈ ರೀತಿ ಉತ್ತರಿಸಿದ್ದಾರೆ. ಸೋಲುವ ಭಯದಿಂದ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದೀರಾ? ಇದರ ಅಸಲಿಯತ್ತು ಏನು ಎಂದು ಬಿಜೆಪಿ ವಕ್ತಾರರು ಟಾಂಗ್ ಕೊಟ್ಟಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ