ಮತ ನೀಡಲ್ಲ ಎಂದಿದ್ದಕ್ಕೆ ಏರ್ ಗನ್‌ನಿಂದ ಕೊಂದ ಬಿಜೆಪಿ ಅಧ್ಯಕ್ಷ

ಶನಿವಾರ, 21 ಏಪ್ರಿಲ್ 2018 (17:15 IST)
ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ರೊಬ್ಬರು ಬಿಜೆಪಿ ಪಕ್ಷಕ್ಕೆ ಮತ ಹಾಕುವಂತೆ ಮತಕೇಳಲು ಹೋಗಿ ಮತ ನೀಡಲು ನಿರಾಕರಿಸಿದ್ದಕ್ಕೆ ಮನೆಯಲ್ಲಿದ್ದ ನಾಯಿಯನ್ನು ಏರ್ ಗನ್ ನಿಂದ ಶೂಟ್ ಮಾಡಿ ಕೊಂದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೋಡಿಭಾಗ್ ನ ತಾಂತ್ಸೆವಾಡದಲ್ಲಿ ನಡೆದಿದೆ. 
ಕೋಡಿಭಾಗ್ ನ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸನೀಲ್ ತಾಮಸೆ ಎಂಬುವವರೇ ಏರ್ ಗನ್ ನಿಂದ ನಾಯಿ ಯನ್ನು ಶೂಟ್ ಮಾಡಿದ ವ್ಯಕ್ತಿ.  ಕಾರವಾರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯಾರ್ಥಿ ರೂಪಾಲಿ ನಾಯ್ಕಗೆ ಮತ ನೀಡುವಂತೆ ಕೋಡಿಭಾಗ್ ನ ಸಂತೋಷ್ ಕಾಂಬ್ಳೆ ಎಂಬುವವರಿಗೆ ಬೆದರಿಸಿದ್ದಾರೆ. 
 
ಇದಕ್ಕೆ ಒಪ್ಪದ ಅವರು ಮತಹಾಕುವುದಿಲ್ಲ ಎಂದು ನಿರಾಕರಿಸಿದ್ದಾರೆ. ಇದರಿಂದ ಕುಪಿತಗೊಂಡ ಸುನಿಲ್ ತಾಮಸೆ ತನ್ನ ಮನೆಯಲ್ಲಿದ್ದ ಏರ್ ಗನ್ ತಂದು ಬೆದರಿಸಿದ್ದಾನೆ. ಆಗ ಮನೆಯಲ್ಲಿದ್ದ ಸಾಕು ನಾಯಿ ಬೊಗಳಿದ್ದು ಇದರಿಂದಾಗಿ ಮತ್ತಷ್ಟು ಕುಪಿತಗೊಂಡು ಕೈಯಲ್ಲಿದ್ದ ಏರ್ ಗನ್ ನಿಂದ ನಾಯಿಗೆ ಶೂಟ್ ಮಾಡಿದ್ದಾನೆ . ಇದರಿಂದಾಗಿ ನಾಯಿ ಗಂಭೀರ ಗಾಯಗೊಂಡಿದ್ದು ಚಿಕಿತ್ಸೆ ಕೊಡಿಸಿದರೂ ಬದುಕುಳಿಯಲಿಲ್ಲ. ಇನ್ನು ಈ ಬಗ್ಗೆ ಕಾರವಾರ ನಗರ ಠಾಣೆಯಲ್ಲಿ ಸುನೀಲ್ ತಾಮಸೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 
 
ಪ್ರಕರಣ ದಾಖಲಿಸುತ್ತಿದ್ದಂತೆ ಪ್ರತಿ ದೂರು ಸಹ ದಾಖಲಾಗಿದ್ದು ನಾಯಿಯ ಕಳೆಬರಹವನ್ನು ಅಂಕೋಲದ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ