ಯಡಿಯೂರಪ್ಪ ಸಂಬಂಧಿಗಾಗಿ ವಿ ಸೋಮಣ್ಣ ಪುತ್ರನ ತ್ಯಾಗ

ಭಾನುವಾರ, 22 ಏಪ್ರಿಲ್ 2018 (09:47 IST)
ಬೆಂಗಳೂರು: ಮೇ 12 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಅರಸೀಕೆರೆಯಲ್ಲಿ ಬಿಜೆಪಿಯಿಂದ ಯಡಿಯೂರಪ್ಪ ಸಂಬಂಧಿ ಮರಿಸ್ವಾಮಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.

ಅರಸಿಕೆರೆಯಲ್ಲಿ ವಿ ಸೋಮಣ್ಣ ಪುತ್ರ ಡಾ. ಅರುಣ್ ಸೋಮಣ್ಣ ಸ್ಪರ್ಧಿಸುವುದಾಗಿ ಈ ಮೊದಲು ಸುದ್ದಿ ಬಂದಿತ್ತು. ಆದರೆ ಇದೀಗ ಅರುಣ್ ಕಣದಿಂದ ಹಿಂದೆ ಸರಿದಿದ್ದು, ಆ ಅದೃಷ್ಟ ಮರಿಸ್ವಾಮಿಗೆ ಒಲಿದುಬಂದಿದೆ.

ಯಡಿಯೂರಪ್ಪ ಸಂಬಂಧಿಯೂ ಆಗಿರುವ ಮರಿಸ್ವಾಮಿ ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯನಲ್ಲದೆ, ಉದ್ಯಮಿಯೂ ಹೌದು. ಇದೀಗ ಇವರ ಹೆಸರನ್ನು ಅಧಿಕೃತವಾಗಿ ಘೋಷಿಸುವುದೊಂದೇ ಬಾಕಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ