ಜನಾರ್ಧನ ರೆಡ್ಡಿ, ಶ್ರೀರಾಮುಲು, ಬಿಜೆಪಿ ವಿರುದ್ಧ ಗುಡುಗಿದ ಟಪಾಲ್ ಗಣೇಶ್

ಸೋಮವಾರ, 23 ಏಪ್ರಿಲ್ 2018 (13:18 IST)
ಒಂದು ಕಡೆ ಅಮಿತ್ ಶಾ ಅವರು  ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಹೇಳ್ತಾರೆ. ನಿನ್ನೆ ಮೊಳಕಾಲ್ಮೂರುನಲ್ಲಿ ಶ್ರೀರಾಮುಲು ನಾಮಪತ್ರ ಸಲ್ಲಿಸುವ ವೇಳೆ ಜನಾರ್ಧನರೆಡ್ಡಿ ಜತೆಗಿಟ್ಟುಕೊಂಡಿದ್ದರು. ಜನಾರ್ಧನರೆಡ್ಡಿ ಬಂದಿದ್ದು ಬಿಜೆಪಿಗೆ ಆನೆ ಬಲ ಬಂದಿದೆ ಎಂದರು. 
  ಜನಾರ್ಧನ ರೆಡ್ಡಿ ಸಿಎಂಗೆ ಸಿದ್ದರಾವಣ ಅಂತಾರೆ. ಬಿಜೆಪಿ ಗೆದ್ದರೆ ಶತ್ರು ಸಂಹಾರ ಅಂತಿದಾರೆ. ಆರ್ಥಿಕ ಸಂಪನ್ಮೂಲ ಇರುವ ವ್ಯಕ್ತಿಗಳು. ಬಿಜೆಪಿಗೆ ಬೇಕು. ಜನಾರ್ಧನರೆಡ್ಡಿ ಅಂಡ್ ಟೀಂಗೆ ಬಳ್ಳಾರಿ ಜಿಲ್ಲೆಯಲ್ಲಿ ಟಿಕೆಟ್ ಸಿಕ್ಕಿದೆ. ಭ್ರಷ್ಟಾಚಾರ ನಿರ್ಮೂಲನೆ ಎಲ್ಲಿಂದ ಮಾಡ್ತಿರಿ ಎಂದರು. 
 
ರಾಜ್ಯದ ಜನತೆಗೆ ಏನ್ ಮೆಸೇಜ್ ಕೊಡಲು ಹೊರಟಿರುವಿರಿ. ಈ ಕುರಿತು ಅಮಿತ್ ಶಾ ಸ್ಪಷ್ಟನೆ ಕೊಡಬೇಕು ಎಂದು ಟಪಾಲ್ ಗಣೇಶ್ ಆಗ್ರಹಿಸಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ