ಗರುಡ ಪುರಾಣದ ಪ್ರಕಾರ ಈ ಮೂರು ಕೆಲಸಗಳನ್ನು ಅಪೂರ್ಣ ಮಾಡಬಾರದಂತೆ

ಶನಿವಾರ, 29 ಜೂನ್ 2019 (08:36 IST)
ಬೆಂಗಳೂರು : ಕೆಲವರಿಗೆ ಯಾವುದೇ ಕೆಲಸಗಳನ್ನು ಮಾಡಿದರೂ ಅದನ್ನು ಅರ್ಧದಲ್ಲೇ ಬಿಡುವ ಅಭ್ಯಾಸವಿರುತ್ತದೆ. ಆದರೆ ಗರುಡ ಪುರಾಣದ ಪ್ರಕಾರ ಈ ಮೂರು ಕೆಲಸಗಳನ್ನು ಅರ್ಧದಲ್ಲೇ ಬಿಟ್ಟು ಬರಬಾರದಂತೆ. ಇದರಿಂದ ಅನಾಹುತ ಸಂಭವಿಸುತ್ತದೆಯಂತೆ.




* ಗರುಡ ಪುರಾಣದ ಪ್ರಕಾರ ಬೆಂಕಿಯನ್ನು ಎಂದಿಗೂ ಕೂಡ ಸುಮ್ಮನೆ ಉರಿಯಲು ಬಿಡಬಾರದಂತೆ. ಬೆಂಕಿ ಉರಿಯುತ್ತಿರುವುದನ್ನು ಎಲ್ಲಾದರೂ ಅಕಸ್ಮಾತಾಗಿ ಕಂಡರೆ ಎಷ್ಟು ಬೇಗ ಸಾಧ್ಯವಾಗುತ್ತದೋ, ಅಷ್ಟು ಬೇಗನೆ ಅದನ್ನು ನಂದಿಸಬೇಕಂತೆ.

*ಯಾವುದೇ ವೈದ್ಯಕೀಯ ಚಿಕಿತ್ಸೆಗಳನ್ನು ಅರ್ಧದಲ್ಲಿಯೇ ನಿಲ್ಲಿಸಬಾರದಂತೆ. ಇದರಿಂದ ಆರೋಗ್ಯ ಹಾಳಾಗಿ ಅಪಾಯ ಸಂಭವಿಸುತ್ತದೆಯಂತೆ.

* ಸಾಲವಾಗಿ ತೆಗೆದುಕೊಂಡ ಹಣವನ್ನು ಬೇಗನೆ ತಮ್ಮ ವಾರಸುದಾರರಿಗೆ ಹಿಂದಿರುಗಿಸಿ. ಹಿಂದಿರುಗಿಸದೆ ಉಳಿಸಿಕೊಳ್ಳುವುದರಿಂದ ನಿಮಗೆ ಒಂದರ ನಂತರ ಮತ್ತೊಂದು ತೊಂದರೆಯನ್ನು ತಂದೊಡ್ಡುತ್ತವೆಯಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ