ಇಂತ ಅತಿಥಿಗಳನ್ನು ಯಾವುದೇ ಕಾರಣಕ್ಕೂ ಮನೆಗೆ ಕರೆಯಬೇಡಿ

ಶುಕ್ರವಾರ, 21 ಸೆಪ್ಟಂಬರ್ 2018 (16:19 IST)
ಬೆಂಗಳೂರು : ಅತಿಥಿ ದೇವೋ ಭವಃ’ ಅಂದರೆ ಭಾರತೀಯ ಸಂಸ್ಕೃತಿಯಲ್ಲಿ ಮನೆಗೆ ಬರುವ ಅತಿಥಿಯನ್ನು ದೇವರೆಂದು ಪರಿಗಣಿಸಲಾಗುತ್ತದೆ. ಆದರೆ ಮನು ಸ್ಮೃತಿಯ ಪ್ರಕಾರ ಕೆಲವರನ್ನು ಮನೆಗೆ ಕರೆಯಲೇಬಾರದು. ಒಂದು ವೇಳೆ ಅವರು ಮನೆಗೆ ಪ್ರವೇಶಿಸಿದರೆ ಆ ಮನೆಗೆ ಕೆಟ್ಟದಾಗುತ್ತದೆಯಂತೆ.


* ತನ್ನ ಹಿತಕ್ಕಾಗಿ ಕೆಟ್ಟದ್ದನ್ನು ಬಯಸುವವರನ್ನು ಎಂದೂ ಮನೆಗೆ ಕರೆದು ಸತ್ಕಾರ ಮಾಡಬೇಡಿ ಎಂದಿದೆ ಮನುಸ್ಮೃತಿ. ಇಂಥವರು ಮನೆಗೆ ಬಂದ್ರೆ ನಿಮ್ಮ ಮನೆಯ ಶಾಂತಿ ಹಾಳಾಗುತ್ತದೆ.

* ಎರಡು ತಲೆಯ ಹಾವಿನಂತಿರುವ ಅವರು ಮುಂದೊಂದು ಹಿಂದೊಂದು ಮಾತನಾಡ್ತಾರೆ. ಬೇರೆಯವರ ಘನತೆ, ಸಂಪತ್ತು, ಗೌರವವನ್ನು ಕಸಿದುಕೊಳ್ತಾರೆ. ಇಂಥವರ ಸತ್ಕಾರ ಮಾಡಬಾರದಂತೆ. ಯಾಕೆಂದರೆ ಇಂಥ ವ್ಯಕ್ತಿಗಳು ತಮ್ಮ ಜೊತೆ ನಕಾರಾತ್ಮಕ ಶಕ್ತಿಯನ್ನು ಮನೆಯೊಳಗೆ ತರುತ್ತಾರೆ. ಕುಟುಂಬದ ಸದಸ್ಯರೊಬ್ಬರು ತಿಳಿಯದೇ ಈ ಶಕ್ತಿಯ ಪ್ರಭಾವಕ್ಕೊಳಗಾಗ್ತಾರೆ. ಇದರಿಂದಾಗಿ ಕುಟುಂಬ ಸರ್ವನಾಶ ಹೊಂದುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ