ರಾಹುಕಾಲದಲ್ಲಿ ಹೊರಗಡೆ ಹೋಗಲೇಬೇಕಾದ ಸಂದರ್ಭ ಬಂದರೆ ತಪ್ಪದೇ ಇದನ್ನು ತಿಂದು ಹೋಗಿ

ಭಾನುವಾರ, 17 ಫೆಬ್ರವರಿ 2019 (09:32 IST)
ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹು ಕಾಲದಲ್ಲಿ ಯಾವುದೇ ಶುಭ ಸಮಾರಂಭಗಳನ್ನು ಮಾಡಬಾರದು ಎಂದು ಹೇಳುತ್ತಾರೆ. ಯಾಕೆಂದರೆ ಆ ಸಮಯ  ಅಶುಭವಾದ್ದರಿಂದ ಯಾವುದೇ ಕೆಲಸ ಮಾಡಿದರೂ ಅದರಿಂದ ತೊಂದರೆ ಎದುರಿಸಬೇಕಾಗುತ್ತದೆ.

ರಾಹು ಕಾಲದಲ್ಲಿ ಉದ್ಯೋಗ  ಶುರು ಮಾಡಬಾರದು. ಯಜ್ಞ ಯಾಗಾದಿಗಳನ್ನು ಮಾಡಬಾರದು. ಎಂಗೇಜ್ಮೆಂಟ್, ಮದುವೆ, ಗೃಹ ಪ್ರವೇಶ ಸೇರಿದಂತೆ ಶುಭ ಕಾರ್ಯಗಳನ್ನು ಮಾಡಬಾರದು. ಹೊಸ ಕೃಷಿ ಕೆಲಸವನ್ನು ರಾಹು ಕಾಲದಲ್ಲಿ ಮಾಡಬೇಡಿ. ರಾಹು ಕಾಲದಲ್ಲಿ ವಾಹನ, ಮನೆ, ಮೊಬೈಲ್, ಕಂಪ್ಯೂಟರ್, ಟಿವಿ, ಆಭರಣ ಸೇರಿದಂತೆ ಯಾವುದೂ ಅಮೂಲ್ಯ ವಸ್ತುಗಳನ್ನು ಖರೀದಿ ಮಾಡಬಾರದು.

 

ಅಲ್ಲದೇ ರಾಹುಕಾಲದಲ್ಲಿ ಹೊರಗಡೆ ಹೋದರೆ ಅಪಾಯವಾಗುವ ಸಂಭವಿರುತ್ತದೆ ಎನ್ನುತ್ತಾರೆ. ಆದರೆ ಕೆಲವೊಮ್ಮೆ ಅನಿವಾರ್ಯ ಸಂದರ್ಭಗಳಲ್ಲಿ ರಾಹುಕಾಲದಲ್ಲೇ  ಹೊರಗಡೆ ಕೆಲಸಕ್ಕೆ ಹೋಗಬೇಕಾಗುತ್ತದೆ. ಆ ವೇಳೆ ಹೊರಗಡೆ ಹೋಗುವಾಗ ಮೊಸರು ಹಾಗೂ ಸಿಹಿ ತಿಂದು ಮನೆಯಿಂದ ಹೊರಗೆ ಹೋಗಬೇಕು. ಇದರಿಂದ ಕೆಟ್ಟದಾಗುವುದಿಲ್ಲವೆನ್ನುತ್ತಾರೆ ಪಂಡಿತರು.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ