ಯುಗಾದಿ ಹಳೆಯದನ್ನು ಕಳೆತು ಹೊಸತನ್ನು ಸ್ವಾಗತಿಸುವ ಕಾಲ. ಜೀವನದಲ್ಲಿ ಸಿಹಿ-ಕಹಿ ಎರಡನ್ನೂ ಸಮನಾಗಿ ಸ್ವೀಕರಿಸಬೇಕು ಎಂದು ಸಂದೇಶ ಸಾರುವ ದಿನ. ಈ ದಿನ ಮನೆಯವರೆಲ್ಲರೂ ಬೆಳಿಗ್ಗೆಯೇ ಎದ್ದು ಎಣ್ಣೆ ಸ್ನಾನ ಮಾಡಿ ದೇವರ ಪೂಜೆ ಮಾಡಬೇಕು. ಬಳಿಕ ಬೇವು-ಬೆಲ್ಲ ಸೇವನೆ ಮಾಡಬೇಕು.
ಯುಗಾದಿ ದಿನ ಪೂಜೆ ಮಾಡುವಾಗ ಉತ್ತಮ ಆರೋಗ್ಯ, ಆಯುಷ್ಯ ವೃದ್ಧಿಗಾಗಿ ಈ ಮಂತ್ರವನ್ನು ತಪ್ಪದೇ ಪಠಿಸಿ
ಶತಾಯು ವಜ್ರದೇಹಾಯ ಸರ್ವಸಂಪತ್ಕಾರಯ ಚ
ಸರ್ವಾರಿಷ್ಟ ವಿನಾಶಾಯ ನಿಂಬಕಮ್ ದಲ ಭಕ್ಷಣಂ
ಜೀವನದಲ್ಲಿ ಎಲ್ಲಾ ರೀತಿಯ ಅಡೆತಡೆಗಳು, ದೈಹಿಕ ಮತ್ತು ಮಾನಸಿಕ ಆರೋಗ್ಯ ನಿವಾರಣೆಯಾಗಲು ಬೇವನ್ನು ಸೇವಿಸೋಣ ಎಂದು ಸಂದೇಶ ಸಾರುವ ಮಂತ್ರ ಇದಾಗಿದೆ.