ವಿದ್ಯೆ, ಉದ್ಯೋಗ, ವ್ಯಾಪಾರಗಳಲ್ಲಿ ಸೋಲನ್ನು ಅನುಭವಿಸುತ್ತಿರುವವರು ಈ ವ್ರತಾ ಅಚರಣೆ ಮಾಡಬೇಕಂತೆ

ಭಾನುವಾರ, 20 ಮೇ 2018 (10:10 IST)
ಬೆಂಗಳೂರು : ಶಿಷ್ಟರಕ್ಷಕನಾದ ಶ್ರೀ ಮಹಾವಿಷ್ಣು ಅನುಗ್ರಹವನ್ನು ಪಡೆಯಬೇಕೆಂದು ಕೊಳ್ಳುವವರು ಬುಧ ಗ್ರಹ ವ್ಯತಿರಿಕ್ತ ಫಲಗಳ ಕಾರಣದಿಂದ ವಿದ್ಯೆ, ಉದ್ಯೋಗ, ವ್ಯಾಪಾರಗಳಲ್ಲಿ ಸೋಲನ್ನು ಅನುಭವಿಸುತ್ತಿರುವವರು ಈ ವ್ರತಾಚರಣೆ ಮಾಡಬೇಕು ಎಂದು ಪಂಡಿತರು ಹೇಳುತ್ತಾರೆ.


ವ್ರತ ವಿಧಾನ:
ಯಾವುದೇ ಮಾಸವಾದರೂ ಶುಕ್ಲಪಕ್ಷದಲ್ಲಿ ಬರುವ ಮೊದಲ ಬುಧವಾರ ದಿನ ಪ್ರಾರಂಭಿಸಿ, 21 ವಾರಗಳ ಕಾಲ ಈ ವ್ರತವನ್ನು ಮಾಡಬೇಕು. ಬುಧವಾರ ಪೂಜೆ ಮಾಡುವವರು ಅಡುಗೆಯಲ್ಲಿ ಉಪ್ಪು ಬಳಸಬಾರದು.

ಸೊಪ್ಪಿನ ಸಂಬಾರ್, ಹಸಿರು ಬಾಳೆಹಣ್ಣು, ಹಸಿರು ದ್ರಾಕ್ಷಿ ಮುಂತಾದ ಎಲೆಹಸಿರಿನಲ್ಲಿರುವ ಆಹಾರ ಪಾನೀಯಗಳನ್ನು ಮಾತ್ರ ಸೇವಿಸಬೇಕು. ಹಸಿರು ಬಣ್ಣದ ವಸ್ತುಗಳನ್ನು ದಾನ ಮಾಡಬೇಕು. ಗೋವುಗಳಿಗೆ ಹಸಿ ಹುಲ್ಲು ತಿನ್ನಿಸುವುದು ಶ್ರೇಷ್ಠ. ಹಿಟ್ಟಿನಿಂದ ಮಾಡಿದ ಪದಾರ್ಥಗಳನ್ನು ನೈವೇದ್ಯ ಕೊಟ್ಟು, ಪ್ರಸಾದವಾಗಿ ಸ್ವೀಕರಿಸಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ