ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬುಧವಾರ, 27 ಮಾರ್ಚ್ 2019 (08:36 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ವೃತ್ತಿರಂಗದಲ್ಲಿ ಕಾರ್ಯದೊತ್ತಡ ಅನುಭವಕ್ಕೆ ಬರುವುದು. ವ್ಯವಹಾರದಲ್ಲಿ ಮುನ್ನಡೆ ಇದೆ. ವಿದ್ಯಾರ್ಥಿಗಳಿಗೆ ತೀವ್ರ ಪ್ರಯತ್ನ ಅಗತ್ಯ. ಆರೋಗ್ಯ ಕೈ ಕೊಡುವುದು. ಆರ್ಥಿಕವಾಗಿ ಆದಾಯಕ್ಕೆ ಕೊರತೆಯಿರದು. ಹಾಗಿದ್ದರೂ ಬಾಕಿ ಹಣ ಪಾವತಿ ಚಿಂತೆ ಕಾಡುವುದು.

ವೃಷಭ: ತಾಳ್ಮೆ ಮತ್ತು ಸಂಯಮ ಎರಡೂ ಇಂದು ನಿಮಗೆ ತುಂಬಾ ಮುಖ್ಯ. ದುಡುಕು ಮಾತಿನಿಂದ ಉತ್ತಮ ಅವಕಾಶ ಕಳೆದುಕೊಳ್ಳುವಿರಿ. ಆರೋಗ್ಯ ಸುಧಾರಿಸುವುದು. ಉದ್ಯೋಗ ನಿಮಿತ್ತ ಹೊಸ ಅವಕಾಶಗಳು ಬಂದಾಗ ಕಣ್ಮುಚ್ಚಿ ಕೂರಬೇಡಿ.

ಮಿಥುನ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕೆಲಸಗಳಿಗೆ ಮನ್ನಣೆ ಸಿಕ್ಕಿ ಬಡ್ತಿ ಯೋಗವಿದೆ. ಆದಾಯವೂ ಸಾಕಷ್ಟಿದ್ದು, ಖರ್ಚಿಗೆ ನಾನಾ ದಾರಿ ಹುಡುಕುವಿರಿ. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ. ವಿದ್ಯಾರ್ಥಿಗಳು ಅಭ್ಯಾಸದ ಕಡೆಗೆ ಗಮನ ಕಳೆದುಕೊಳ್ಳುವರು.

ಕರ್ಕಟಕ: ದೈವಾನುಕೂಲವಿದ್ದು, ಅಂದುಕೊಂಡ ಕಾರ್ಯಗಳು ಸುಗಮವಾಗಿ ನೆರವೇರಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಚಿಂತನೆ ನಡೆಸುವಿರಿ. ಸಹೋದರಿಯ ಮದುವೆ ನಿಮಿತ್ತ ಹೊಣೆಗಾರಿಕೆ ಹೊರಬೇಕಾಗುತ್ತದೆ.

ಸಿಂಹ: ಕಚೇರಿಯಲ್ಲಿ ನಿಮ್ಮ ಮಾತು ನಡೆಯುವುದು. ಆದಾಯ ಹೆಚ್ಚಿ, ಆಸ್ತಿ, ವಾಹನ ಖರೀದಿಗೆ ಮನಸ್ಸು ಮಾಡುವಿರಿ. ಆದರೆ ಹಿತಶತ್ರುಗಳು ಬೆನ್ನಹಿಂದೆಯೇ ಇರುತ್ತಾರೆ. ಬಣ್ಣದ ಮಾತಿಗೆ ಮರುಳಾಗಬೇಡಿ. ಎಚ್ಚರಿಕೆಯಿಂದಿರಿ.

ಕನ್ಯಾ: ಹೂಡಿಕೆ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರೆ ಕೊಂಚ ಮಟ್ಟಿಗೆ ನಷ್ಟ ಅನುಭವಿಸಬೇಕಾಗುತ್ತದೆ. ಆದರೂ ಕಾರ್ಯ ಸಾಧನೆಗೆ ತೊಡಕಾಗದು. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ದಿನದಂತ್ಯಕ್ಕೆ ಶುಭ ಸುದ್ದಿ.

ತುಲಾ: ಅನಿರೀಕ್ಷಿತವಾಗಿ ಸಿಗುವ ಮಿತ್ರನಿಂದ ನಿಮ್ಮ ಸಂತೋಷ ವೃದ್ಧಿಯಾಗುವುದು. ಇಷ್ಟ ಭೋಜನ ಮಾಡುವಿರಿ. ಆದರೆ ಆರೋಗ್ಯ ಕೈಕೊಡುವ ಸಾಧ್ಯತೆಯಿದೆ. ಸಂಸಾರದಲ್ಲಿ ಸಣ್ಣ ಪುಟ್ಟ ಕಿರಿ ಕಿರಿ ಇದ್ದರೂ ಸರಿದೂಗಿಸಿಕೊಂಡು ಹೋಗಬೇಕಾಗುತ್ತದೆ.

ವೃಶ್ಚಿಕ: ಉದ್ಯಮಿಗಳು ಆರ್ಥಿಕವಾಗಿ ಲಾಭ ಪಡೆದು ಶುಭ ಫಲ ಕಾಣುವರು. ರಾಜಕೀಯವಾಗಿ ನಿಮ್ಮ ಸ್ಥಾನ ಮಾನ ಹೆಚ್ಚುವುದು. ಆದರೆ ಅಪವಾದದ ಭೀತಿಯೂ ಇದೆ. ಕುಟುಂಬದಲ್ಲಿ ಕುಲದೇವರಿಗೆ ಸಂಬಂಧಿಸಿದ ಪೂಜೆ ಮಾಡಿ, ಒಳ್ಳೆಯದಾಗುತ್ತದೆ.

ಧನು: ಕಾರ್ಯನಿಮಿತ್ತ ವಿಪರೀತ ಓಡಾಟ ನಡೆಸಬೇಕಾಗುತ್ತದೆ. ಇದರಿಂದ ದೇಹಾಯಾಸವಾಗಬಹುದು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರುವುದಾದರೂ ಮನಸ್ಸಿಗೆ ಒಪ್ಪಿಗೆಯಾಗದು.

ಮಕರ: ಕೆಟ್ಟ ಮಿತ್ರರ ಸಹವಾಸದಿಂದ ಆರೋಗ್ಯ, ಜೀವನ ಹಾಳು ಮಾಡಿಕೊಳ್ಳುವಿರಿ. ಇನ್ನೊಬ್ಬರ ಸಲಹೆಗಳಿಗೆ ವಿಪರೀತ ಕಿವಿಗೊಡುವುದನ್ನು ಬಿಡಿ. ಆರ್ಥಿಕವಾಗಿ ಯಶಸ್ಸು ಪಡೆಯಲು ಸಾಕಷ್ಟು ಬೆವರು ಸುರಿಸಬೇಕಾಗುತ್ತದೆ. ದೇವತಾ ಪ್ರಾರ್ಥನೆ ಮಾಡಿ.

ಕುಂಭ: ನೂತನ ದಂಪತಿಗಳಿಗೆ ಮಧುಚಂದ್ರದ ಭಾಗ್ಯವಿದೆ. ಇಷ್ಟು ದಿನ ಹಿಡಿದಿಟ್ಟುಕೊಂಡಿದ್ದ ಗುಟ್ಟು ಇಂದು ರಟ್ಟು ಮಾಡಬೇಕಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳು ನಿಮ್ಮ ಮುನ್ನಡೆಗೆ ಸಹಕಾರ ನೀಡುವರು.

ಮೀನ: ಅನಿರೀಕ್ಷಿತವಾಗಿ ಬರುವ ಬಂಧು ಮಿತ್ರರಿಂದ ಶುಭ ಸುದ್ದಿ ನಿರೀಕ್ಷಿಸಬಹುದು. ವ್ಯಾಪಾರ ವ್ಯವಹಾರಗಳಲ್ಲಿ ಹೂಡಿಕೆ ಮಾಡಲು ಉತ್ತಮ ದಿನ. ಆರ್ಥಿಕವಾಗಿ ಅಭಿವೃದ್ಧಿ ಕಾಣುವಿರಿ. ಹೆಚ್ಚಿನ ಶುಭ ಫಲಗಳಿಗಾಗಿ ದೇವತಾ ಪ್ರಾರ್ಥನೆ ಮಾಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ                         

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ