ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಸೋಮವಾರ, 6 ಮೇ 2019 (07:05 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಸಹಕಾರಿ ಕ್ಷೇತ್ರದಲ್ಲಿರುವವರಿಗೆ ಲಾಭ. ಮನೆ ರಿಪೇರಿ, ಗೃಹ ಸಂಬಂಧೀ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಿರಿ. ಪ್ರೀತ ಪಾತ್ರರೊಂದಿಗೆ ಸುಂದರ ಸಮಯ ಕಳೆಯುವಿರಿ. ಆದರೆ ಇಲ್ಲದ ಅಪವಾದ ಕೇಳಿಬಂದೀತು.

ವೃಷಭ: ವಾಹನ ಖರೀದಿಗೆ ಮುಂದಾಗುವ ಮೊದಲು ಪರಾಮರ್ಶಿಸುವುದು ಒಳಿತು. ಕೃಷಿಕರಿಗೆ ಮಳೆಗಾಗಿ ಪ್ರಾರ್ಥಿಸಬೇಕಾಗುತ್ತದೆ. ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ಕಿರಿ ಕಿರಿ ಉಂಟಾಗುವುದು. ದಿನದಂತ್ಯಕ್ಕೆ ಶುಭ ಸುದ್ದಿ.

ಮಿಥುನ: ಅಂದುಕೊಂಡ ಕಾರ್ಯಗಳು ಅರ್ಧಕ್ಕೇ ನಿಂತು ಮನಸ್ಸಿಗೆ ಬೇಸರವೆನಿಸಲಿದೆ. ಆದಾಯಕ್ಕೆ ನಾನಾ ಮಾರ್ಗಗಳನ್ನು ಕಂಡುಕೊಳ್ಳುವಿರಿ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ನಿರುದ್ಯೋಗಿಗಳು ಉದ್ಯೋಗಕ್ಕಾಗಿ ಪರದಾಡಬೇಕಾದೀತು.

ಕರ್ಕಟಕ: ಪ್ರವಾಸ, ಮೋಜು ಮಸ್ತಿಗಾಗಿ ವಿಪರೀತ ಖರ್ಚು ಮಾಡುವಿರಿ. ಆದರೆ ಧನಾಗಮನದ ಬಗ್ಗೆ ಚಿಂತೆಯಾಗುವುದು. ಅನಿರೀಕ್ಷಿತವಾಗಿ ಹಳೆಯ ಮಿತ್ರರು ಭೇಟಿಯಾಗಲಿದ್ದಾರೆ. ವ್ಯಾಪಾರಿಗಳು ಕೊಂಚ ನಷ್ಟ ಅನುಭವಿಸಬೇಕಾಗಬಹುದು.

ಸಿಂಹ: ವೃತ್ತಿರಂಗದಲ್ಲಿ ಸಹೋದ್ಯೋಗಿಗಳು ಮಾಡಿದ ತಪ್ಪಿಗೆ ನೀವು ಅವಮಾನ, ಬೈಗುಳ ಕೇಳಬೇಕಾಗಿ ಬರಬಹುದು. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟು ಎದುರಾದೀತು. ವಿದ್ಯಾರ್ಥಿಗಳು ಪರಿಶ್ರಮ ಪಡಬೇಕು.

 
ಕನ್ಯಾ: ಸದ್ಯಕ್ಕೆ ದೂರ ಪ್ರಯಾಣ ಮುಂದೂಡುವುದು ಒಳ್ಳೆಯದು. ರಾಜಕೀಯ ವರ್ಗದವರಿಗೆ ಅಡೆತಡೆಗಳು, ವಿರೋಧಗಳು ಎದುರಾದೀತು. ನಿರುದ್ಯೋಗಿಗಳು ಉದ್ಯೋಗಾವಕಾಶಕ್ಕೆ ದೂರ ಪ್ರಯಾಣ ಮಾಡಬೇಕಾದೀತು.

ತುಲಾ: ಖರ್ಚು ವೆಚ್ಚಗಳ ಬಗ್ಗೆ ನಿಗಾವಹಿಸಬೆಕಾಗಬಹುದು. ಶುಭ ಮಂಗಲ ಕಾರ್ಯಗಳಿಗಾಗಿ ಸಾಕಷ್ಟು ಓಡಾಟ ನಡೆಸಬೇಕಾಗುತ್ತದೆ. ದೇಹಾರೋಗ್ಯದ ಬಗ್ಗೆ ಗಮನ ಹರಿಸಬೇಕಾಗುತ್ತದೆ. ನಿಮ್ಮ ಒಳ್ಳೆತನದ ದುರುಪಯೋಗವಾಗದಂತೆ ಎಚ್ಚರಿಕೆ ವಹಿಸಬೇಕು.

ವೃಶ್ಚಿಕ: ಮಡದಿಯ ಆಸೆ ಆಕಾಂಕ್ಷೆಗಳಿಗೆ ಬೆಲೆ ಕೊಡಬೇಕಾಗುತ್ತದೆ. ಕಾರ್ಯ ಕ್ಷೇತ್ರದಲ್ಲಿ ಹಿತ ಶತ್ರುಗಳ ಬಾಧೆಯಿಂದ ವಿಘ್ನಗಳು ಕಂಡುಬಂದೀತು. ವಿವೇಚನೆಯಿಂದ ಗುರಿ ಸಾಧಿಸಬೇಕಾದೀತು. ಆಕಸ್ಮಿಕವಾಗಿ ಧನಲಾಭವಾಗಬಹುದು.

ಧನು: ವಿವಾಹ ಸಂಬಂಧೀ ಅಡೆತಡೆಗಳಿಗೆ ಪರಿಹಾರ ಕಾಣಲು ಕುಲದೇವರ ಪ್ರಾರ್ಥನೆ ಮಾಡಬೇಕಾಗುತ್ತದೆ. ಆರ್ಥಿಕವಾಗಿ ಅಡೆತಡೆಗಳಿದ್ದರೂ ಅಂತಿಮವಾಗಿ ದೈವಾನುಕೂಲದಿಂದ ಕಾರ್ಯ ಸಾಧನೆಯಾಗಲಿದೆ.

ಮಕರ: ವ್ಯಾಪಾರೀ ವರ್ಗದವರಿಗೆ ಕಾರ್ಯದೊತ್ತಡ ಹೆಚ್ಚಲಿದೆ. ಹಾಗಿದ್ದರೂ ಆದಾಯಕ್ಕೆ ಕೊರತೆಯಾಗದು. ಕೆಳ ಹಂತದ ನೌಕರ ವರ್ಗದವರಿಗೆ ಉದ್ಯೋಗದಲ್ಲಿ ಕಿರಿ ಕಿರಿ. ಹಿರಿಯರು ತೀರ್ಥ ಯಾತ್ರೆಗೆ ತೆರಳಲಿದ್ದಾರೆ.

ಕುಂಭ: ಯಾವುದೋ ಮಾನಸಿಕ ಚಿಂತೆ ನಿಮ್ಮ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರಲಿದೆ. ಸಂಗಾತಿಯ ಅಸಮಾಧಾನಕ್ಕೆ ಕಾರಣರಾಗುವಿರಿ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ.

ಮೀನ: ಮನೆಯಲ್ಲಿ ವಿವಾಹ ಪ್ರಸ್ತಾಪಗಳು ನಡೆಯಲಿವೆ. ಆರ್ಥಿಕವಾಗಿ ಸಾಕಷ್ಟು ಧನಾಗಮನವಿದ್ದು, ಕಾರ್ಯ ಸಾಧನೆಯಾಗಲಿದೆ. ನೂತನ ದಂಪತಿಗಳ ಮಧ್ಯೆ ವಿರಸ ಮೂಡಲಿದೆ. ವಿದೇಶ ಯಾನದ ಭಾಗ್ಯ ಒದಗಿಬರಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ