ಅಕಾಲಿಕ ರೋಗ, ಮೃತ್ಯುಭಯ ಹೋಗಲಾಡಿಸಲು ಈ ಹೋಮ ಮಾಡಬೇಕು

ಶುಕ್ರವಾರ, 15 ಫೆಬ್ರವರಿ 2019 (09:10 IST)
ಬೆಂಗಳೂರು: ವೈದಿಕ ಗ್ರಂಥಗಳ ಪ್ರಕಾರ, ಮೃತ್ಯುಂಜಯ ಹೋಮ ಜೀವನದಲ್ಲಿ ಅಪಾಯಗಳನ್ನು ಕಡಿಮೆ ಮಾಡುವ ಮೂಲಕ ವ್ಯಕ್ತಿಯ ಜೀವಿತಾವಧಿಯನ್ನು ಹೆಚ್ಚಿಸುತ್ತದೆ.


ಪ್ರಮುಖ ರೋಗಗಳು ಮತ್ತು ಖಾಯಿಲೆಗಳಿಂದ ಚೇತರಿಸಿಕೊಳ್ಳಲು ಬಯಸುವವರಿಗೆ ಮೃತ್ಯುಂಜಯ ಹೋಮ ಸೂಕ್ತವಾದದ್ದು. ಅಕಾಲಿಕ ಮರಣ ತಡೆಗಟ್ಟಲು, ಅಪಘಾತಗಳು, ಗಾಯಗಳು, ಅಸ್ವಸ್ಥೆಯನ್ನು ಕಡಿಮೆ ಮಾಡಲು ಇದರಿಂದ ಸಾಧ್ಯ.

ಇದರ ಜತೆಯಲ್ಲಿ ಈ ಹೋಮ ದೀರ್ಘ ಮತ್ತು ಸಂತೋಷದ ಜೀವನವನ್ನು ನಡೆಸಲು ಅನುಕೂಲಕರವಾಗುವಂತೆ ಮಾಡುತ್ತದೆ. ಈ ಹೋಮ ಕರ್ಮದ ಸಮಸ್ಯೆಗಳನ್ನು ಮತ್ತು ದೋಷಗಳನ್ನು ತೊಡೆದು ಒಬ್ಬರ ಜೀವನ ಉತ್ತಮಪಡಿಸುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ